ಮಾ 29ರಿಂದ ಕಲ್ಮೇಶ್ವರ ಜಾತ್ರಾ ಮಹೋತ್ಸವ
Kalmeshwara Jatra festival from March 29th
ಲೋಕದರ್ಶನ ವರದಿ
ಬೆಳಗಾವಿ 26 : ತಾಲೂಕಿನ ಚಂದನ ಹೊಸೂರ ಗ್ರಾಮದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ರವಿವಾರ ದಿ. 29ರಿಂದ ಏಪ್ರೀಲ್ 02ರವರೆಗೆ ಐದು ದಿನಗಳ ಕಾಲ ಕಲ್ಮೇಶ್ವರ ಜಾತ್ರಾ ಮಹೋತ್ಸವು ಅತಿ ವಿಜೃಂಬಣೆಯಿಂದ ಜರುಗುವುದು.
ರವಿವಾರ ದಿ. 29ರಂದು ಜಾತ್ರಾ ಪ್ರಾರಂಭವಾಗಿ ಅಂಬಲಿ ಬಂಡೆಗಳನ್ನು ಸಿದ್ದಪಡಿಸುವುದು ಹಾಗೂ ಕಿಚ್ಚದ ಕಟ್ಟಿಗೆಯನ್ನು ಪೂಜೆ ಮಾಡಿತರುವುದು. ಸೋಮವಾರ ದಿ. 30ರಂದು ಸಾಯಂಕಾಲ 6 ಗಂಟೆಗೆ ಕಲ್ಮೇಶ್ವರ ಗುಡಿ ಸುತ್ತ ಅಂಬಲಿ ಬಂಡಿಗಳು ಪ್ರದಕ್ಷಣೆ ಹಾಕುವುದು. ನಂತರ ಅಂಬಲಿ ಹಾಗೂ ಗುಗ್ಗರಿ ಮಹಾಪ್ರಸಾದ ಜರುಗುವುದು. ರಾತ್ರಿ ಭಜನೆ, ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಮಂಗಳವಾರ ದಿ. 31ರಂದು ಗ್ರಾಮದ ಭಕ್ತಾಧಿಗಳಿಂದ ಚಕ್ಕಡಿ, ಟ್ರಾಕ್ಟರ, ಟೆಂಪು ಇನ್ನೀತರ ವಾಹನಗಳಿಂದ ಕಿಚ್ಚದ ಕಟ್ಟಿಗೆಯನ್ನು ಕಿಚ್ಚ ತಯಾರಿಸಿ ಸಾಯಂಕಾಲ 6 ಗಂಟೆಗೆ ಕಿಚ್ಚ ಹಾಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.30ಕ್ಕೆ ಸಂಗ್ಯಾ ಬಾಳ್ಯಾ ನಾಟಕ ಇರುವುದು.
ಬುಧವಾರ ದಿ. 01ರಂದು ಕಲ್ಮೇಶ್ವರ ದೇವಸ್ಥಾನದಲ್ಲಿ ಕಾಯಿ ಒಡೆಯುವುದು ನಂತರ ಭಕ್ತಾಧಿಗಳಿಂದ ತೋಕಾನುತುಕ ಟೆಂಗಿನಕಾಯಿಗಳನ್ನು ನೀಡಿತಮ್ಮ ಹರಕೆಗಳನ್ನು ತಿರಿಸಿಕೊಳ್ಳುತ್ತಾರೆ. ಗುರುವಾರ ದಿ. 02ರಂದು ಪಾಲಕಿ ಸೇವೆಯೊಂದಿಗೆ ಜಾತ್ರ್ರೆಯು ಸಂಪನ್ನವಾಗುವುದು ಎಂದು ಗ್ರಾಮದ ಪಂಚ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 