ಮಾನವ ಜನ್ಮ ದೊಡ್ಡದು: ಸಂಗಮೇಶ
Human birth is great: Sangamesha
ತಾಳಿಕೋಟೆ 09: ಭಗವಂತ ಸೃಷ್ಟಿಸಿರುವ ಈ ಜಗತ್ತಿನಲ್ಲಿ ಮಾನವ ಜನ್ಮ ಬಹುದೊಡ್ಡದು 84 ಲಕ್ಷ ಜೀವರಾಶಿಗಳಲ್ಲಿ ನಮಗೆ ಮಾತ್ರ ಮಾತು, ಬುದ್ದಿ, ತಿಳಿವಳಿಕೆ ನೀಡಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರವಚನಕಾರ ಅಂಬಳನೂರ ಸಂಗಮನಾಥ ದೇವರು ಹೇಳಿದರು.
ಅವರು ಪಟ್ಟಣದ ಶ್ರೀ ಖಾಸ್ಕತ ಮಹಾಶಿವಯೋಗಿಗಳವರ 129ನೆ ಹಾಗೂ ವಿರಕ್ತ ಮಹಾಸ್ವಾಮಿಗಳ 11ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀ ಖಾಸ್ಸತೇಶ್ವರ ಮಠದಲ್ಲಿ ಭಾನುವಾರ ಪ್ರಾರಂಭವಾದ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನಿಡಿ ಮಾತನಾಡಿದರು. ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲ ಶಿವಯೋಗಿ ಸಿದ್ದಲಿಂಗ ದೇವರ ಅಧ್ಯಕ್ಷತೆ ವಹಿಸಿದ್ದರು. ಗವಾಯಿಗಳಾಗಿ ಮಹೇಶಕುಮಾರ ಭಂಟನೂರ, ಬಸನಗೌಡ ಬಿರಾದಾರ ಚೋಕಾವಿ ಕಾರ್ಯನಿರ್ವಹಿಸುತ್ತಿದ್ದಾರೆ ಸೆ. 12ರವರೆಗೆ ಪ್ರತಿ ಸಂಜೆ 7ರಿಂದ 8.30 ಗಂಟೆಯವರೆಗೆ ಈ ಆಧ್ಯಾತ್ಮಿಕ ಪ್ರವಚನ ನಡೆಯುವುದು. ಸೆ.12ರಂದು ನಸುಕಿನ ಜಾವ 5 ಗಂಟೆಗೆ ಉಭಯಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಲಿದ್ದು, ಮಹಾಪ್ರಸಾದ ಜರುಗುವುದು. ಅಂದು ಸಂಜೆ 7 ಗಂಟೆಗೆ ಹರ-ಗುರು ಚರಮೂರ್ತಿಗಳಿಂದ ಧರ್ಮಸಭೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 