ಹೊಸಪೇಟೆ: ನಗರಸಭೆಗೆ ಪ್ರಾದೇಶಿಕ ಆಯುಕ್ತ ಭೇಟಿ
ಲೋಕದರ್ಶನ ವರದಿ
ಹೊಸಪೇಟೆ 24: ನಿಗದಿತ ವೇಳೆಗೆ ಸಾರ್ವಜನಿಕರ ಕಡತ ವಿಲೇವಾರಿ ಮಾಡಿ. ಇಲ್ಲವಾದರೆ, ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ನಗರಸಭೆ ಅಧಿಕಾರಿಗಳಿಗೆ ಕಲಬುರಗಿ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಖಡಕ್ ಎಚ್ಚರಿಕೆ ನೀಡಿದರು.
ನಗರಸಭೆ ಕಚೇರಿಯಲ್ಲಿ ಬುಧವಾರ ಬಿಲ್ ಕಲೆಕ್ಟರ್, ಇಂಜಿನಿಯರ್ ಸೇರಿ ಇತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಆಸ್ತಿಗೆ ಸಂಬಂಧಿಸಿದ ಫಾರಂ ನಂ-3, ಖಾತೆ ಬದಲಾವಣೆ ಸೇರಿ ಇತರ ಸಾರ್ವಜನಿಕರ ಕಡತಗಳು ಒಂದು ವರ್ಷ ಮುಗಿದರೂ ಬಾಕಿ ಇರುವ ಕುರಿತು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ನಿಮ್ಮ ಕಾರ್ಯವೈಖರಿ ತಿಳಿಯಲಿದೆ. ಮಧ್ಯವತರ್ಿಗಳ ಹಾವಳಿಯೂ ಜಾಸ್ತಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದೇ ರೀತಿ ನಿರ್ಲಕ್ಷೃಮುಂದುವರಿದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು. ನನೆಗುದಿಗೆ ಬಿದ್ದಿರುವ 247 ಶುದ್ಧ ಕುಡಿವ ನೀರಿನ ಯೋಜನೆ, ಬೈಪಾಸ್ನಲ್ಲಿ ಕೈಗೊಂಡಿರುವ ಉದ್ಯಾನ ನಿಮರ್ಾಣ ಕುರಿತು ಪೌರಾಯುಕ್ತ ವಿ.ರಮೇಶ್ ಅವರಿಂದ ಮಾಹಿತಿ ಪಡೆದರು. ಡಿಸಿ ಎಸ್.ಎಸ್.ನಕುಲ್, ಎಸಿ ಪಿ.ಎನ್.ಲೋಕೇಶ್, ತಹಸೀಲ್ದಾರ್ ಎಚ್.ವಿಶ್ವನಾಥ ಇತರರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 