ಚಿನ್ನದ ಪದಕ ವೀಜೆತ ಸಂದೀಪ ಕುಂಬಾರಗೆ ಸತ್ಕಾರ
ಲೋಕದರ್ಶನ ವರದಿ
ಶೇಡಬಾಳ 24: ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ ಕೇಂದ್ರ ಮೇಲ್ವಿಚಾರಕರ ಸಂಘ ಬೆಂಗಳೂರು ಇದರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಾಬಾಸಾಬ ಅಣ್ಣಪ್ಪಾ ಕುಂಬಾರ ಹಾಗೂ ರಾಷ್ಟ್ರಮಟ್ಟದ ಲಾಂಗಜಂಪ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಸಂದೀಪ ರಾಮು ಕುಂಬಾರ ಇವರ ಸತ್ಕಾರ ಸಮಾರಂಭ ಉಗಾರ ಖುರ್ದ ಪಟ್ಟಣದಲ್ಲಿ ಜರುಗಿತು.
ಶುಕ್ರವಾರ ದಿ. 24 ರಂದು ಉಗಾರ ಖುರ್ದ ಪಟ್ಟಣದ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರ ಸಂಘ ನಿ., ಕಾರ್ಯಾಲಯದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪಣ್ಣ ಕುಂಬಾರ ಹಾಗೂ ಆಡಳಿತ ಮಂಡಳಿ ಸದಸ್ಯರು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ ಕೇಂದ್ರ ಮೇಲ್ವಿಚಾರಕರ ಸಂಘ ಬೆಂಗಳೂರು ಇದರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಲೂಳ ಗ್ರಾಮದ ಬಾಬಾಸಾಬ ಅಣ್ಣಪ್ಪಾ ಕುಂಬಾರ ಹಾಗೂ ರಾಷ್ಟ್ರಮಟ್ಟದ ಲಾಂಗಜಂಪ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಸಪ್ತಸಾಗರ ಗ್ರಾಮದ ಹಳ್ಳಿ ಹೈದ ಸಂದೀಪ ರಾಮು ಕುಂಬಾರ ಅವರನ್ನು ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಗುರುರಾಜ ಕುಂಬಾರ, ಆಡಳಿತ ಮಂಡಳಿ ಸದಸ್ಯರಾದ ಸುಭಾಷ ಕುಂಬಾರ, ರಾವಸಾಬ ಕುಂಬಾರ, ರಾಮಪ್ಪ ಕುಂಬಾರ, ಯೋಗೇಶ ಕುಂಬಾರ, ಬಾಳಪ್ಪ ಕುಂಬಾರ, ಸುನೀತಾ ಕುಂಬಾರ, ಸದಾಶಿವ ಕಾಂಬಳೆ, ಸದಾಶಿವ ಕುಂಬಾರ, ದತ್ತಾ ಕುಂಬಾರ, ಸುಜಾತಾ ಕುಂಬಾರ, ಸುನಂದಾ ಕುಂಬಾರ ಹಾಗೂ ಸಿಬ್ಬಂದಿ ವರ್ಗ, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 