ದೂಧಗಂಗಾ ನದಿಗೆ ಗಂಗಾ ಪೂಜೆ
ಯಕ್ಸಂಬಾ ಪಟ್ಟಣದ ರೈತರು ದೂಧಗಂಗಾ ನದಿಗೆ ಗಂಗಾ ಪೂಜೆ ಸಲ್ಲಿಸಿದರು
ಮಾಂಜರಿ 21: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ವತಿಯಿಂದ ರೈತರು ಮತ್ತು ಸದಸ್ಯರು ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಮರ್ಪಕ ಮಳೆ ಸುರಿದು ದೂಧಗಂಗಾ ನದಿ ತುಂಬಿ ಹರಿಯುತ್ತಿರುವುದರಿಂದ ಶುಕ್ರವಾರ ದೂಧಗಂಗಾ ನದಿಗೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅಪರ್ಿಸಿದರು.
ಪ್ರಾರಂಭದಲ್ಲಿ 5 ಜನ ಸುಮಂಗಲೆಯರಿಂದ ನದಿಯ ಪೂಜೆ ನೆರವೇರಿತು. ಕಳೆದ 2-3 ವರ್ಷಗಳಿಂದ ಮಳೆಗಾಲದಲ್ಲಿ ಮಳೆಯು ಸಂಪೂರ್ಣವಾಗಿ ಕೈಕೊಟ್ಟಿತ್ತು. ಆದರೆ ಈ ವರ್ಷ ಮಳೆಯ ಪ್ರಮಾಣ ಹೆಚ್ಚಿಗೆ ಆಗಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ರೈತರಿಗೆ ಅನೂಕೂಲವಾಗಿದೆ. ಪಟ್ಟಣದ ದೂದಗಂಗಾ ನದಿಯ ಪಾತ್ರ ತುಂಬಿ ಹರಿಯುತ್ತಿದ್ದು, ಮಳೆ ಹೆಚ್ಚಿಗೆ ಆಗಿದ್ದರಿಂದ ಪಟ್ಟಣದ ರೈತರು ಮತ್ತು ಸಾರ್ವಜನಿಕರು ದೂಧಗಂಗಾ ನದಿಗೆ ಬಾಗಿನ ಅಪರ್ಿಸಿ ಪೂಜೆ ಸಲ್ಲಿಸಿದರು.
ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ಅಧ್ಯಕ್ಷ ಮಹೇಶ ಬಾಕಳೆ, ಸುರೇಶ ಹಿರೇಮಠ, ದರೆಪ್ಪಾ ಖೋತ, ಪುಂಡಲೀಕ ಹಿಟಣೆ, ಬಾಬು ಬಾಕಳೆ, ನಿಂಗಪ್ಪಾ ದವಣೆ, ಸುರೇಶ ಕಬಾಡೆ, ಪುಂಡಲೀಕ ಸಾತ್ವರ, ಪಂಡಿತ ಜಾಧವ, ಶ್ರಾವಣ ರಾಯಮಾನೆ, ಅಣ್ಣಪ್ಪಾ ಖೋತ, ಮಾರುತಿ ಮಜಗೆ, ರಾಹುಲ್ ನಾಯಿಕ್, ವಿಠ್ಠಲ ನಾಯಿಕ್ ಸೇರಿದಂತೆ ರೈತರು, ಮಹಿಳೆಯರು ಉಪಸ್ಥಿತರಿದ್ದರು,
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 