ಗಾಂಧೀ, ಶಾಸ್ತ್ರೀ ಜಯಂತಿ ಆಚರಣೆ
ಲೋಕದರ್ಶನ ವರದಿ
ಬೆಳಗಾವಿ 05: ಬೆಳಗಾವಿ ಜಿಲ್ಲಾ ಅಂಧ ಮಕ್ಕಳ ಸಂಸ್ಥೆಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಸಭಾಗೃಹದಲ್ಲಿ ಗಾಂಧಿ ಜಯಂತಿ, ಲಾಲ್ ಬಹಾದ್ದೂರ ಶಾಸ್ತ್ರೀ ಜಯಂತಿ ಹಾಗೂ ಶಾಲಾ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೋರಲ, ಕ್ರೇಡಾಯಿಯ ಅಧ್ಯಕ್ಷ ರಾಜೇಶ ಹೆಡಾ, ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಅಧ್ಯಕ್ಷರಾದ ವಿಕಾಸ ಕಲಘಟಗಿ, ಗೌ. ಕಾರ್ಯದರ್ಶಿಗಳಾದ ಪ್ರಭಾಕರ ನಾಗರಮನ್ನೊಳಿ, ಮುಖ್ಯೋಪಾಧ್ಯಾಯನಿಯರಾದ ಅನಿತಾ ಗಾವಡೆ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರಮೇಶ ಗೋರಲ, ಹೆಡಾ ಇವರು ಶಾಲೆಯ ಸರ್ವಾಗೀಣ ಪ್ರಗತಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜೇಂದ್ರ ಮುಂದಡಾ, ಬಾಲಕಿಶನ ಭಟ್ಟಡ, ಚಿಂತಾಮಣಿ ಗ್ರಾಮೋಪಾದ್ಯೆ, ರಾಜಶೇಖರ ಹೀರೆಮಠ, ಆನಂದ ಜೋಶಿ, ಜಯರಾಮ ಸುತಾರ, ಕಿಶೋರ ಮಾಲು, ವಾದಿರಾಜ ಕಲಘಟಗಿ, ಗಣೇಶ ಹೆಗಡೆ, ರಾಮ ಮೋಹನ ನಾಯಕ, ಪ್ರೇಮರಾಜ ಚಿಂಡಕ, ಅಶೋಕ ಚಿಂಡಕ, ಚಂದ್ರಶೇಖರ ಬೆಂಬಳಗಿ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೂರಜ ಡಾವಳೆ (ಕನ್ನಡ), ಸಿದ್ಧಪ್ಪ ತೋರಣಗಟ್ಟಿ, ವೈಷ್ಣವಿ ಪಾಟೀಲ (ಹಿಂದಿ)ಯಲ್ಲಿ ಸಂಸ್ಥೆ ಮತ್ತು ಗಾಂಧೀಜಿ, ಲಾಲ್ ಬಹಾದ್ದೂರ ಶಾಸ್ತ್ರೀ, ಅವರ ಕುರಿತು ಮಾತನಾಡಿದರು.
ಸ್ಮೀತಾ ಮಿಟಗಾರ (ಶಿಕ್ಷಕರು) ಕಾರ್ಯಕ್ರಮದ ನಿರೂಪಣೆ ಮಾಡಿದರು. ನಂತರದಲ್ಲಿ ಸಂಸ್ಥೆಯ ಅಧ್ಯಕ್ಷ ವಿಕಾಸ ಕಲಘಟಗಿ ಮತ್ತು ಅತಿಥಿಗಳು ಮಾಜಿ ಸದಸ್ಯರಾದ ಶೋಕ ಅಧ್ಯಾಪಕ, ದಾನಿಗಳಾದ ಜ್ಯೋತಿ ದೇಸಾಯಿ, ಸರಸ್ವತಿ ದೇಸಾಯಿ, ಪ್ರೇಮಲತಾ ಕುಲಕರ್ಣಿ, ಪಿ.ಬಿ.ಕುಲಕರ್ಣಿ, ಪ್ರಲ್ಹಾದ ರಾಜಪುರೋಹಿತ ಪ್ರಿಯಾ ರಾಜ ಪುರೀಹಿತ, ಡಾ. ಮಹಾರುದ್ರಪ್ಪಾ ಕುಂಬಾರ ಇವರನ್ನು ಸತ್ಕರಿಸಲಾಯಿತು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 