ಸುಕ್ಷೇತ್ರ ಮುಗಳಖೋಡದಲ್ಲಿ ಇಂದಿನಿಂದ ಶ್ರೀ ರೇಣುಕಾದೇವಿ 26ನೇ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಮುಗಳಖೋಡ,21: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಶ್ರೀ ರೇಣುಕಾದೇವಿ 26ನೇ ಜಾತ್ರಾ ಮಹೋತ್ಸವವು ಗುರವಾರ ದಿ 22 ರಿಂದ ಶುಕ್ರವಾರ ದಿ 23 ವರೆಗೆ ಅತಿ ವಿಜೃಂಭನೆಯಿಂದ ಜರುಗುವುದು.
ಗುರುವಾರ ದಿ 22 ರಂದು ಶ್ರೀ ಡಾ.ಮುರಘರಾಜೇಂದ್ರ ಮಹಾಸ್ವಾಮಿಗಳ ಹಸ್ತದಿಂದ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದು. ರಾತ್ರಿ 9 ಗಂಟೆಗೆ ಸ್ಥಳಿಯ ಮೇಳದವರಿಂದ ಆಧ್ಯಾತ್ಮ ವಿಷಯಗಳಿಂದ ಡೊಳ್ಳಿನ ಪದಗಳು ಚೌಡಕಿ ಪದಗಳು ನಡೆಯುವವು.
ಶುಕ್ರವಾರ ದಿ 23 ರಂದು ಮುಂಜಾನೆ 6 ಗಂಟೆಯಿಂದ ಶ್ರೀ ರೇಣುಕಾದೇವಿಗೆ ಮಹಾ ಅಭಿಷೇಕ ಪ್ರಾರಂಭವಾಗುವುದು. ನಂತರ 9 ಗಂಟೆಗೆ ಗ್ರಾಮದ ಸಕಲ ಭಕ್ತರು ಆರತಿ ಕುಂಭಗಳ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ದೇವಿಯ ಭವ್ಯ ಮೆರಣಿಗೆ ನಡೆಯುವುದು. ಮಧ್ಯಾಹ್ನ 12 ಗಂಟೆಗೆ ದೇವಿಯ ಹಡ್ಲಗಿ ತುಂಬುವ ಕಾರ್ಯಕ್ರಮ ನಡೆಯುವುದು. ನಂತರ 01 ಗಂಟೆಯಿಂದ ಮಹಾಪ್ರಸಾದ ನಡೆಯುವುದು. ರಾತ್ರಿ 10 ಗಂಟೆಗೆ ಮದರಖಂಡಿಯ ಶ್ರೀ ಮಲ್ಲಿಕಾಜರ್ುನ ಪ್ರಸಾದಿತ ನಾಟ್ಯ ಸಂಘದಿಂದ "ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ಎಂಬ ಭಕ್ತಿ ಪ್ರದಾನ ನಾಟಕ ನಡೆಯುವುದು. ಪಟ್ಟಣದ ಎಲ್ಲ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 