ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರ
Free special banana-based medicine distribution camp
ಲೋಕದರ್ಶನ ವರದಿ
ಚಿಕ್ಕೋಡಿ 02: ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರವನ್ನು 04ರಂದು ಮುಂಜಾನೆ 06:00 ರಿಂದ ಮುಂಜಾನೆ 8:00ರವರೆಗೆ ಏರಿ್ಡಸಲಾಗಿದೆ.
ಶಿಬಿರದಲ್ಲಿ ಕೆಮ್ಮು, ದಮ್ಮು, ಶೀತ, ಅಲರ್ಜಿ, ಅಸ್ತಮಾ, ಇತರೆ ಶ್ವಾಸರೋಗಗಳಿಗೆ ಬಾಳೆಹಣ್ಣಿನ ವಿಶೇಷ ಅನುಭೂತ ಆಯುರ್ವೇದ ಓಷಧವನ್ನು 3 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು. ಆಸಕ್ತರು ಪೂರ್ವ ನೋಂದಣಿಯನ್ನು ಒಂದು ದಿನ ಮುಂಚಿತವಾಗಿ ದೂರವಾಣಿಯ ಮೂಲಕ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾಡಿಸಬೇಕು ಮತ್ತು ಓಷಧಿಯನ್ನು ವೈದ್ಯರ ಸಮ್ಮುಖದಲ್ಲಿ ಸೇವಿಸಿ ಒಂದು ಘಂಟೆ ನಂತರ ಅನುಮತಿ ಪಡೆದು ಹೋಗಬೇಕು. ನೊಂದಾಯಿತ ಮೊದಲ 100 ಜನರಿಗೆ ಮಾತ್ರ ಓಷಧಿಯನ್ನು ಪಡೆಯಲು ಬರುವವರು ಬೆಳಿಗ್ಗೆ 6 ರಿಂದ 8 ಘಂಟೆಯೊಳಗೆ ಖಾಲಿ ಹೊಟ್ಟೆಯಲ್ಲಿ ಬರಬೇಕು.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 