ಬೆಲೆ ಕುಸಿತ ಮೆಣಸಿನಕಾಯಿ ಬೆಳೆ ನಾಶ ಪರಿಹಾರಕ್ಕೆ ರೈತ -ರಾಮಣ್ಣ ತಳವಾರ ಒತ್ತಾಯ
Farmers demand compensation for chilli crop damage due to price drop - Ramanna Talavara
ಲಕ್ಷ್ಮೇಶ್ವರ" 30: ತಾಲೂಕಿನ ಶಿಗ್ಲಿ ಗ್ರಾಮದ ರೈತ ರಾಮಣ್ಣ ತಳವಾರ ಅವರು ಬೆಳೆದಿದ್ದ ನಾಲ್ಕು ಏಕರೆ ಮೆಣಸಿನಕಾಯಿ ಬೆಳೆಗೆ ನಿಗದಿತ ಬೆಲೆ ಸಿಗದ ಹಿನ್ನೆಲೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ತಿಂಗಳ ಪರಿಶ್ರಮದಿಂದ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ನಷ್ಟಕ್ಕೆ ಗುರಿಯಾಗಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ರಾಮಣ್ಣ ತಳವಾರ ಅವರಿಗೆ ಖರ್ಚು ಮಾಡಿದ ಹಣವೂ ಮರಳಿ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಬೇಸರಗೊಂಡ ಅವರು ತಮ್ಮ ಹೊಲದಲ್ಲಿದ್ದ ಎಲ್ಲಾ ಮೆಣಸಿನಕಾಯಿ ಬೆಳೆಯನ್ನು ಹರಿದು ಹಾಕಿ ತಮ್ಮ ಬೇಸರವನ್ನು ವ್ಯಕ್ತಪಡಿಸಿರುವ ಘಟನೆ ನಡೆದಿದ್ದು ರೈತರ ಸಂಕಷ್ಟದ ನೈಜ ಚಿತ್ರಣವಾಗಿದ್ದು, ಸರ್ಕಾರ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಬೆಂಬಲ ಬೆಲೆ ಹಾಗೂ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 