ರಾಯಬಾಗ 05: ಪರಿಸರ ದಿನ ಎಂದರೆ ಕೇವಲ ಒಂದೇ ದಿನಕ್ಕೆ ಸೀಮಿತವಾಗದೇ, ಪ್ರತಿಯೊಬ್ಬರು ಒಂದು ಗಿಡನೆಟ್ಟು ಪರಿಸರ ದಿನ ಆಚರಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಗುರುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ತಾಲೂಕು ಕಾನೂನು ಸೆವಾ ಸಮಿತಿ ಹಾಗೂ ವಕೀಲರ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರುಣಿ, ಪಕ್ಷಗಾರರಿಗೆ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು, ಮುಂದಿನ ಜನಾಂಗಕ್ಕೆ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಪ್ಲಾಸ್ಟಿಕ್ ಮಿತಮಿರಿ ಬಳಕೆಯಿಂದ ಪರಿಸರ ಮಲಿನಗೊಳ್ಳುತ್ತಿದ್ದು, ನಮ್ಮ ದೇಶವನ್ನು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಲು ನಾವೇಲ್ಲರೂ ಕೈಜೋಡಿಸಬೇಕೆಂದರು.
ವಕೀಲರಾದ ಟಿ.ಕೆ.ಶಿಂಧೆ ಮಾತನಾಡಿ, ಮನುಷ್ಯನಿಗೆ ಬೇಕಾದ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಆಹಾರ ಸಿಗುವುದು ಪರಿಸರದಿಂದಲೇ. ಪರಿಸರ ರಕ್ಷಣ, ಕಾಳಜಿ ಮತ್ತು ಜಾಗೃತಿ ಮೂಡಿಸಲು ಪ್ರತಿ ಜೂ.5 ರಂದು ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದಾನಪ್ಪ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಉಮೇಶ ಪ್ರಧಾಣಿ, ಸ.ಸ.ಅಭಿಯೋಜಕರಾದ ಮಹಾವೀರ ಗಂಡವ್ವಗೋಳ, ಹನಮಂತ ಅಚಮಟ್ಟಿ, ಛಾಯಾ ಬೇಡಿಕಿಹಾಳೆ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಅರಣ್ಯ ಅಧಿಕಾರಿಗಳಾದ ಹಣಮಂತ ಕಾಂಬಳೆ, ಸಂದೀಪ ಕುಂಬಾರ, ಸತೀಶ ಮುಂಗರವಾಡಿ, ಮಲಗೌಡ ಪಾಟೀಲ, ಸುರಜ ಭುಯಿ, ಪ್ರವೀಣ ಹಾದಿಮನಿ, ಮೋಹನ ಕಾಡಗಿ, ಆನಂದ ಹಿರೇಮಠ, ವಕೀಲರಾದ ಎಸ್.ವಿ.ಪೂಜಾರಿ, ಎಸ್.ಬಿ.ಪಾಟೀಲ, ಎಸ್.ಸಿ.ದಿಕ್ಷೀತ, ಬಸವರಾಜ ಯಲಶೆಟ್ಟಿ, ಸುನೀಲ ಗಾಯಕವಾಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಅನೇಕರು ಇದ್ದರು.