ರಾಜಕಾರಣಿಗಳು ಬದಲಾದರೂ ಅಭಿವೃದ್ಧಿ ಕಾರ್ಯಗಳು ಬದಲಾಗಬಾರದು: ಜೋಶಿ

Even if politicians change, development work should not change: Joshi

ಶಿಗ್ಗಾವಿ 09: ಕ್ಷೇತ್ರದ ಜನರ ಅನುಕೂಲಕ್ಕೆ ತಕ್ಕಂತೆ ರಾಜಕಾರಣಿಗಳು ಬದಲಾದರೂ ಸಹಿತ ಅಭಿವೃದ್ಧಿ ಕಾರ್ಯಗಳು ಬದಲಾಗದೆ ನಿರಂತರವಾಗಿರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.    

ತಾಲೂಕಿನ ಜೇಕಿನಕಟ್ಟಿ ಬಳಿ 6.50 ಲಕ್ಷ ಅನುದಾನದಡಿ ಸರಕಾರಿ ಮೆಟ್ರಿಕ್ ನಂತರ, ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ನಡೆದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಆರ್ಥಿಕತೆ ಸುಧಾರಣೆಯತ್ತ ಸಾಗಿದ್ದು, ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ದೇಶವಾಗಿದ್ದು, ಮುಂದಿನ ಎರಡು ವರ್ಷಗಳ ಒಳಗಾಗಿ ಬಲಿಷ್ಠ ಮೂರರೊಳಗೆ ಭಾರತವಿರಲಿದೆ. ಅಲ್ಲದೇರಾಜಕೀಯ ಪಕ್ಷ ಯಾವುದೇ ಇರಲಿ, ವ್ಯಕ್ತಿ ಯಾರೇ ಆಗಿರಲಿ ಜನ ಕಲ್ಯಾಣಕ್ಕಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ ಮೇಲೆ ಜನರ ನಾಡಿ ಮಿಡಿ ತಕ್ಕನಗುಣವಾಗಿ ಜನರ ಸೇವೆ ಮಾಡಲು ಬದ್ಧರಾಗಿರಬೇಕು. ಸೇವೆಯಲ್ಲಿ ರಾಜಕೀಯ ಬೆರಸುವುದು ಸರಿಯಲ್ಲ.ಭಾಕ್ಸ ಸುದ್ದಿ : ಒಂದೇ ಕ್ಷೇತ್ರದಲ್ಲಿ ಎರಡು ರಾಜಕೀಯ ಪಕ್ಷಗಳ ಮುಖಂಡರು ಬೇರೆಯಾಗಿದ್ದರೂ, ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೆರಸದೆ ನಮ್ಮ ಪಕ್ಷ, ನಮ್ಮ ರಾಜಕೀಯ ಮರೆತು, ಅವರಿವರಿಗೆ ಟೀಕೆ ಮಾಡದೆ ಜನರ ಅಭಿವೃದ್ಧಿಗೋಸ್ಕರ ಶ್ರಮಿಸಬೇಕು. 

ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಅಡಿಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಭಾರತೀಯ ಸಂವಿಧಾನ ಪದ್ಧತಿ ಪ್ರಕಾರವೇ ಕೆಲಸವನ್ನು ಮಾಡಬೇಕಾಗುತ್ತದೆ ಹೀಗಿರುವಾಗ ರಾಜ್ಯ ಮತ್ತು ಕೇಂದ್ರದ ಸಂಬಂಧಗಳಲ್ಲಿ ಶಾಸಕರು, ಸಂಸದರು ಪರಸ್ಪರ ಚರ್ಚೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ.ಈ ಭಾಗದ ರೈತರು ತಮ್ಮ ನದಿ ಜೋಡಣೆಗಳ ಬೇಡಿಕೆಗಳ ತಕ್ಕಂತೆ ರಾಜ್ಯ ಸರಕಾರ ನೀಲನಕ್ಷೆ ತಯಾರಿಸಿ ಅನುಮೋದನೆ ಯೊಂದಿಗೆ ಕೇಂದ್ರಕ್ಕೆ ವರದಿ ಸಲ್ಲಿಸಿದರೆ ಕೇಂದ್ರ ಸರಕಾರದ ಒಪ್ಪಿಗೆ ಪಡೆಯಲು ನಿಮ್ಮ ಜತೆಗೆ ನಾನು ಸಹಕರಿಸುವೆ ಎಂದು ಜೋಶಿ ತಿಳಿಸಿದರು.    

ಶಾಸಕ ಯಾಸೀರಖಾನ್ ಪಠಾಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಕೇಂದ್ರ ಸರಕಾರದ ಒಪ್ಪಿಗೆಯೊಂದಿಗೆ ವಿಶೇಷ ಅನುದಾನ ಕಲ್ಪಿಸಿ, ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಿ, ಈ ಭಾಗದ ರೈತರ ಬಹು ದಿನಗಳ ಕನಸು ನನಸಾಗಿಸಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. ಬೆಣ್ಣೆ ಹಳ್ಳದ ಉಗಮ ಸ್ಥಾನ ಕ್ಷೇತ್ರದಲ್ಲಿದೆ. ಇದರ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರಕಾರಕ್ಕೆ 1600 ಕೋಟಿ ಅನುದಾನ ಪ್ರಸ್ತಾವನೆ ಸಲ್ಲಿಸಿದೆ ಬಿಡುಗಡೆ ಮಾಡಿಸಬೇಕು. ರಾಜ್ಯ ಸರಕಾರದ 2 ನೂರು ಕೋಟಿ ಅನುದಾನದಲ್ಲಿ ಕೆಲಸ ನಡೆದಿದೆ ಎಂದರು.ಕೇಂದ್ರ ಸರಕಾರ ಡಿಎಂಎಗೆ ಕ್ಷೇತ್ರಕ್ಕೆ 18.87 ಮನೆಗಳನ್ನು ನೀಡಿದ್ದಾದರೂ ಪ್ರತಿ ಮನೆ ನಿರ್ಮಾಣಕ್ಕೆ 1.20 ಲಕ್ಷ ಅನುದಾನ ವಿತರಣೆಯಿಂದಾಗಿ ಲಾಭವಾಗುತ್ತಿಲ್ಲ ಪರಿಣಾಮ, 139 ಫಲಾನುಭವಿಗಳಷ್ಟೇ ಆಯ್ಕೆಯಾಗಿದ್ದಾರೆ. ಉಳಿದ 1700 ಮನೆಗಳು ವಾಪಾಸ್ ಹೋಗುತ್ತಿದ್ದು, ಪ್ರತಿ ಮನೆಗೆ ಸ್ಥಾಪನೆಗೆ 5 ಲಕ್ಷ ಅನುದಾನ ಹೆಚ್ಚಳಕ್ಕೆ ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಅತೀವೃಷ್ಟಿಗೆ ಮನೆ ಕಳೆದುಕೊಂಡ 1 ಸಾವಿರ ಮನೆ ಜೆಪಿಎಸ್ ಮಾಡಿಲ್ಲ. ಲಾಕ್ ಆಗಿವೆ. ನಯಾ ಪೈಸೆ ಅನುದಾನ ಬಂದಿಲ್ಲ. ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆದು ಅನುಕೂಲ ಮಾಡಿಕೊಡಲು ಆಗ್ರಹಿಸಿದ ಶಾಸಕರು, ತಡಸದಿಂದ-ಲಕ್ಕಿಕೊಪ್ಪ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.    

ಗಡಿ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಪಕ್ಷ ಬೇರೆಯಾದರೂ ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಉಳಿದ ದಿನಗಳಲ್ಲಿ ಒಗ್ಗಟ್ಟಾಗಿ ಕ್ಷೇತ್ರದ ಅಭಿವೃದ್ಧಿ ಮಾಡೋಣ.ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಸಹಕಾರ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುವ ಮೂಲಕ ಕೈಜೋಡಿಸಬೇಕು ಎಂದು ಕೋರಿದರು.  

ಗುಡ್ಡಪ್ಪ ಜಲದಿ, ಎಸ್‌.ಎಫ್‌.ಮಣಕಟ್ಟಿ, ಸುಧೀರ ಲಮಾಣಿ, ಶ್ರೀಕಾಂತ ಬುಳ್ಳಕ್ಕನವರ, ರಮೇಶ ವನಹಳ್ಳಿ,ಶಿವಾನಂದ ಮ್ಯಾಗೇರಿ ಸೇರಿದಂತೆ ಇತರರಿದ್ದರು.