ಇಬ್ಬರ ಕುರಿ ಕಳ್ಳರ ಬಂಧನ
ಬ್ಯಾಡಗಿ29: ಮನೆಗಳ ಮುಂದೆಕಟ್ಟಿರುವ ಕುರಿಗಳನ್ನು ರಾತ್ರಿ ವೇಳೆ ಕದ್ದುಕೊಂಡು ಫಲ್ಸರ್ ಬೈಕ್ ಮೇಲೆ ಸಾಗಿಸುವ ಇಬ್ಬರು ಕಳ್ಳರ ಜಾಲವನ್ನು ಪೋಲಿಸರು ಬಂಧಿಸಿದ ಘಟನೆ ಮಂಗಳವಾರ ಜರುಗಿದೆ.
ಆರೋಪಿಗಳನ್ನು ಪಕ್ಕೀರಪ್ಪ ದುರುಗಪ್ಪ ಗೋಟನವರ (46) ಸಾ.ಕೆರವಡಿ, ಮಂಜುನಾಥ ನಾಗಪ್ಪ ಗೋಟನವರ (23) ಸಾ. ಕುರುಬಗೊಂಡ ಎಂದು ಗುತರ್ಿಸಿದ್ದು, ಸುಮಾರು 70 ಸಾ.ರೂ.ಮೌಲ್ಯದ ಐದು ಕುರಿಗಳನ್ನು ಕಳವು ಮಾಡಿ ಸಿಕ್ಕಿದ್ದಾರೆ. ಪ್ರಕರಣಗಳ ಪತ್ತೆಗಾಗಿ ಎಸ್ಪಿ, ಎಎಸ್ಪಿ, ಡಿಎಸ್ಪಿ ಹಾಗೂ ಸಿಪಿಐ ಮಾರ್ಗದರ್ಶನದಲ್ಲಿ ಪತ್ತೆಗಾಗಿ ರಚಿಸಲಾಗಿತ್ತು.
ತಾಲೂಕಿನ ಕಲ್ಲೆದೇವರು, ಕೆಂಗೊಂಡ ಸೇರಿದಂತೆ ಕೆಲ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಚಾಣಾಕ್ಷತನದಿಂದ ಕಳವು ಮಾಡಿಕೊಂಡು ಫಲ್ಸರ್ ಬೈಕ್ ಮೇಲೆ ತಂದು ಹೊಲದಲ್ಲಿ ಯಾರಿಗೂ ತಿಳಿಯದಂತೆ ಕೂಡಿಹಾಕಿ, ಬಳಿಕ ದೂರದ ಸಂತೆಗಳಿಗೆ ಹೊಡೆದುಕೊಂಡು ತೆರಳಿ ಮಾರಾಟ ಮಾಡುತ್ತಿದ್ದರೆಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಇಬ್ಬರು ಆರೋಪಿಗಳು ತಾಲೂಕಿನ ಮೋಟೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಬಳಿ 5 ಕುರಿಗಳನ್ನು ಹಿಡಿದುಕೊಂಡು ಬೇರೆಡೆಗೆ ಸಾಗಿಸಲು ವಾಹನ ಕಾಯುತ್ತಾ ನಿಂತಿದ್ದಾಗ ಸಿಕ್ಕಿ ಹಾಕಿಕೊಂಡಿದ್ದಾರೆ. ಬಳಿಕ ಇವರನ್ನು 5 ಕುರಿ ಸಮೇತ ಪೋಲಿಸ್ ಠಾಣೆಗೆ ಕರೆತರಲಾಗಿದೆ.
ಈ ವೇಳೆ ಪಿಎಸ್ಯ ಮಹಾಂತೇಶ ಎಂ.ಎಂ, ಕ್ರೈಮ್ ಪಿಎಸ್ಐ ಎಚ್.ಎನ್.ಕಂಬಳಿ, ಪೋಲಿಸ್ ಸಿಬ್ಬಂದಿಗಳಾದ ಹನುಮಂತ ಕಡೇಮನಿ, ಮಾಲತೇಶ ಈರಣ್ಣನವರ, ಮಂಜುನಾಥ ಮೂಕಿ, ಹನುಮಂತ ಸುಂಕದ ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 