ಇಂದ್ರಾಣಿ ನದಿಯ ಮೇಲ್ಸೆತುವೆ ಕುಸಿದ ದುರಂತದಲ್ಲಿ ಚೇತನ ಸಾವು

Chetan dies in Indrani River flyover collapse tragedy

ರಾಯಬಾಗ 16: ಮಹಾರಾಷ್ಟ್ರದ ಪುಣೆಯ ಇಂದ್ರಾಣಿ ನದಿಯ ಮೇಲ್ಸೆತುವೆ ಕುಸಿದ ದುರಂತದಲ್ಲಿ ವೀಕೆಂಡ್ ಮಸ್ತಿಗಾಗಿ ತೆರಳಿದ್ದ ತಾಲೂಕಿನ ನಸಲಾಪೂರ ಗ್ರಾಮದ ಯುವಕ ಚೇತನ ಚಾವರೆ(22) ಸಾವನ್ನಪಿದ್ದಾರೆ.  

ಪುಣೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಯಾಗಿದ್ದ ಚೇತನ ಚಾವರೆ ಇತನು ತನ್ನ ಸ್ನೇಹಿತರ ಜೊತೆಗೆ ಭಾನುವಾರ ಬೆಳಿಗ್ಗೆ ಇಂದ್ರಾಣಿ ನದಿ ವೀಕ್ಷಣೆಗೆ ತೆರಳಿದ್ದ ಸಮಯದಲ್ಲಿ ಮೇಲ್ಸೆತುವೆ ಕುಸಿದು ಕೊಚ್ಚಿಕೊಂಡು ಹೋಗಿದ್ದ ಚೇತನ ಚಾವರೆ ಶವವಾಗಿ ಪತ್ತೆಯಾಗಿದ್ದಾನೆ. ಸೋಮವಾರ ಬೆಳಗಿನ ಜಾವ ನಸಲಾಪೂರ ಗ್ರಾಮದಲ್ಲಿ ಇತನ ಅಂತ್ಯಕ್ರಿಯೆ ನೆರವೇರಿತು.