ಆನಂದವನ್ನೇ ಕಳೆದುಕೊಂಡಿರುವ ಆನಂದಪುರ ರಸ್ತೆಗಳು
Anandpur roads have lost their joy
ಲೋಕದರ್ಶನ ವರದಿ
ಯಮಕನಮರಡಿ 27: ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆನಂದಪುರ ಗ್ರಾಮಕ್ಕೆ ಹೋಗುವ ರಸ್ತೆ ಮೇಲೆ ತುಂಬಿ ತುಳುಕುತ್ತಿರುವ ಕೊಳಚೆ ನೀರು ಸದರಿ ಆನಂದಪುರ ಬಡಾವಣೆಗೆ ಅಭಿವೃದ್ಧಿ ಮಾಡುವುದಕ್ಕಾಗಿ ಸಚಿವರು ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡಿದರು ಸಹಿತ ಅಲ್ಲಿ ರಸ್ತೆಗಳು ಮಾತ್ರ ಅಭಿವೃದ್ಧಿ ಹೊಂದಿರುವುದಿಲ್ಲ ಹೀಗಾಗಿ ಅಲ್ಲಿಯ ಜನರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ದೇವಸ್ಥಾನಗಳಿಗೆ ಹೋಗುವ ರಸ್ತೆಗಳ ಮೇಲೆ ನಿಂತಿರುವ ಕೊಳಚೆ ನೀರು ಅಲ್ಲದೆ ಕಿತ್ತು ಹೋಗಿರುವ ಕಾಂಕ್ರೀಟ್ ರಸ್ತೆಗಳು ಸಮರ್ಕ ನೀರಿನ ವ್ಯವಸ್ಥೆ ಇಲ್ಲದೆ ಇದ್ದ ಕಾರಣ ಎಲ್ಲಿ ಬೇಕಾದರೂ ನೀರು ಪೋಲಾಗುತ್ತಿದೆ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು
ಸಹಿತ ಯಾವುದೇ ತರದ ಪರಿಹಾರ ಕಾಣುತ್ತಿಲ್ಲ ರಾಜಕೀಯ ಮುಖಂಡರು ಕಣ್ಣೆತ್ತಿ ನೋಡದೆ ಇರುವುದೊಂದು ವಿಷಾದನೀಯ ಸಂಗತಿಯಾಗಿದೆ ಕೇವಲ ತಮ್ಮ ತಮ್ಮ ಪ್ರತಿಷ್ಟಿಗಾಗಿ ಆರೋಪ ಪ್ರತಿ ಆರೋಪ ಇವುಗಳ ಮಾತ್ರ ಕೇಳಿ ಬರುತ್ತವೆ ಹೀಗಾಗಿ ಅಲ್ಲಿಯ ಜನರು ಮುಂಬರುವ ಗ್ರಾಂಪಂ ತಾಪಂ ಚುನಾವಣೆಗಳಲ್ಲಿ ಸಮರ್ಕ ಉತ್ತರ ನೀಡುವುದಕ್ಕಾಗಿ ಸಿದ್ದರಾಗಿದ್ದಾರೆ ಕೇವಲ ಕನಸಿನ ಕೂಸಾಗಿರುವ ಅಭಿವೃದ್ಧಿ ಕಾಮಗಾರಿಗಳು ಎದ್ದು ಕಾಣುತ್ತಿವೆ ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಆನಂದಪುರ ಗ್ರಾಮವು ಒಂದು ಮಾದರಿ ಗ್ರಾಮವಾಗಬೇಕಾಗಿತ್ತು ಆದರೆ ಇದು ಮಾದರಿ ಗ್ರಾಮವಾಗದೆ ತೆಗ್ಗು ಕೊಳೆಚೆ ನೀರಿನಿಂದ ತುಂಬಿ ತುಳುಕುವ ಗ್ರಾಮವಾಗಿದೆ ಕೇವಲ ಇಲ್ಲಿ ಆರೋಪ ಪ್ರತಿ ಆರೋಪ ಗಳೇ ಹೆಚ್ಚಾಗಿ ಕಾಣುತ್ತಿವೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 