ಅಲಿಘರ್ ನಲ್ಲಿ ವಿಮಾನ ಅಪಘಾತ: 6 ಜನ ಪಾರು
ಅಲಿಘರ್, ಆಗಸ್ಟ್ 27 ಧನಿಪುರ ಬಳಿ ಮಂಗಳವಾರ ವಿಮಾನ ಅಪಘಾತ ಸಂಭವಿಸಿ ಇಬ್ಬರು ಪೈಲಟ್ಗಳು ಸೇರಿದಂತೆ ಆರು ಮಂದಿ ಪವಾಡ ಸದೃಶ ರೀತಿಯಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿಟಿ-ಎವಿವಿ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಡಿಕ್ಕಿ ಬಡಿದಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿಸಿದರೂ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿ ಆಹುತಿಯಾಯಿತು. ನವದೆಹಲಿಯಿಂದ ಬರುತ್ತಿದ್ದ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಬಡಿದು ಈ ಅವಗಢ ಸಂಭವಿಸಿದೆ. ಕಿಶೋರ್ ಮತ್ತು ದೀಪಕ್ ಎಂಬ ಇಬ್ಬರು ಪೈಲಟ್ಗಳು ಎಂಜಿನಿಯರ್ಗಳಾದ ರಾಂಪ್ರಕಾಶ್ ಗುಪ್ತಾ, ಪ್ರಭಾತ್ ತ್ರಿವೇದಿ, ಆನಂದ್ ಕುಮಾರ್ ಮತ್ತು ಕಾರ್ತಿಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಂಪನಿಯ ವಿಮಾನಗಳನ್ನು ರಿಪೇರಿ ಮಾಡಲು ಎಂಜಿನಿಯರ್ಗಳನ್ನು ಕರೆದುಕೊಂಡು ಹೋಗುತ್ತಿತ್ತು ಎನ್ನಲಾಗಿದೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 