ಸಂಭ್ರಮದ ರಂಜಾನ್ ಆಚರಣೆ
A festive Ramadan celebration
ಸಂಭ್ರಮದ ರಂಜಾನ್ ಆಚರಣೆ
ಹೂವಿನಹಡಗಲಿ 31: ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಮುಸ್ಲಿಮರ ಮೂವತ್ತು ದಿನಗಳ ಉಪವಾಸ ಅಂತ್ಯಗೊಂಡಿತು.
ಸಾವಿರಾರು ಮುಸ್ಲಿಮರು ಮೇಲು -ಕೀಳೆಂಬ ಭೇದ-ಭಾವ ತೊರೆದು ಪಟ್ಟಣದ 5ನೇ ವಾರ್ಡ್ ಜಮಾ ಮಸೀದಿ ಯಿಂದ ಮೆರವಣಿಗೆ ಮೂಲಕ ಎಪಿಎಂಸಿ ಬಳಿ ಈದ್ಗಾ ಮ್ಯೆದಾನದಲ್ಲಿ ಬೆಳಿಗ್ಗೆ 8.30ಕ್ಕೆ ಸಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ರಂಜಾನ್ ಹಬ್ಬದ ಮೆರುಗು ಹೆಚ್ಚಿಸಿದರು.
ಶಾಸಕ ಎಲ್ ಕೃಷ್ಣ ನಾಯಕ್. ಸಮಾಜದ ಮುಖಂಡರಾದ ವಾರದ ಗೌಸ್. . ಮುದಿನ್. ಇದ್ಗ ಕಮಿಟಿ ಅಧ್ಯಕ್ಷರಾದ. ಕಲೆಗಾರ ಬಡೇಸಾಬ್. ಕಾರ್ಯದರ್ಶಿಯಾದ ಕಪಾಲಿ ಮೊಸಿನ್. ಸದಸ್ಯರಾದ. ಮಾಡ್ರನ್ ಟೈಲರ್ ಖಾಜಾ ಉಪಾಧ್ಯಕ್ಷರಾದ ಈ ಚಾಂದ್ ಭಾಷಾ. ರಾಯದುರ್ಗ ಬಾಷಾ. ಕಾಗದ ಗೌಸ್ ಮುದ್ದಿನ್. ಈ ಚಾನ್ ಸಾಬ್. ಕಡ್ಲಿ ಗೌಸಬ್. ಟೈಲರ್. ಗೌಸಾಬ. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ. ಚಿದಾನಂದ. ಕೋಡಿಹಳ್ಳಿ ಕೊಟ್ರೇಶ್. ಚಂದ್ರ ನಾಯಕ್. ಪುರಸಭೆ ಉಪಾಧ್ಯಕ್ಷರಾದ ಸೊಪ್ಪಿನ ಮಂಜುನಾಥ್. ಬೋರೆಲ್ ಕೋಟಪ್ಪ. ಇತರ. ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಮುಸ್ಲಿಂ ಸಮಾಜದ. ನಾಲ್ಕು ಮಸೀದಿಯ. ಮುತ್ತುಲಿಗಳು. ಮೌಲಿಗಳು, ಪೇಶ ಇಮಾ ಗಳು. ಹಜರತ್. ಶಮ್ಶುದ್ದೀನ್ ಖಾಜಿ. ಕುರಾನ್ ಅನ್ನು ಪಠಿಸಿದರು. ಜಾಮಿಯ ಮಸೀದಿಯ. ಹಜರತ್ . ಅಜರುದ್ದೀನ್. ಸಾಮೂಹಿಕ ಪ್ರಾರ್ಥನೆ ಮಾಡಿಸಿದರು. ಈ ಪ್ರಾರ್ಥನೆಯಲ್ಲಿ. ಹೂವಿನ ಹಡಗಲಿ ಪಟ್ಟಣದ. ಮುಸ್ಲಿಂ ಸಮಾಜದ. ಆರು ದೈವದ. ಸದಸ್ಯರು. ಹಾಗೂ. ತಾಲೂಕಿನ. ಎಲ್ಲಾ ಹಳ್ಳಿಗಳಿಂದ ಬಂದಿರುವ. ಮುಸ್ಲಿಂ ಸಮಾಜದ. ಮುಖಂಡರು. ಮುಸ್ಲಿಂ ಸಮಾಜದ ಯುವ ಮುಖಂಡರು. ಹಾಗೂ. ಸರ್ವ ಮುಸ್ಲಿಂ ಬಾಂಧವರು. ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 