ಸ್ವಾಮಿ ವಿವೇಕಾನಂದರ 156ನೇ ಜಯಂತಿ

ಲೋಕದರ್ಶನ ವರದಿ

ಮುಧೋಳ 13: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಜಯಂತ್ಯೋತ್ಸವ ಸಮಾರಂಭದಲ್ಲಿ ನಗರದ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದೇಶಭಕ್ತ ಯುವಕರು,ನಾಗರಿಕರು ಭಾಗವಹಿಸಿದ್ದರು.

ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಗರದ ಸಕರ್ಾರಿ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಣ್ಣು-ಹಂಪಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ದಯಾನಂದ ವಸ್ತ್ರದ, ಸದಾಶಿವ ಮಜ್ಜಗಿ, ಕೃಷ್ಣಾ ಸುಲಾಕೆ, ಶಮಕರ ಕಮತಗಿ, ಮಂಜು ಮುಂಡಗನೂರ, ಸಂತೋಷಸಿಂಗ್ ಹಜೇರಿ, ಪರಶುರಾಮ ನಿಗಡೆ, ಆನಂದ ಬನ್ನೂರ,ದತ್ತಾ ಮಾನೆ, ಚೇತನ ಉಳ್ಳಾಗಡ್ಡಿ, ಶಿವು ಹುಂಡೇಕಾರ, ಅಕ್ಷಯ ಘೋಪ್ಡೆ, ಮುರುಗೇಶ ಇಟ್ಟಂಗಿ, ನಾರಾಯಣ ಮಾನೆ ಮುಂತಾದವರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿ