ಕಬ್ಬು ಕಟಾವು ಸಾಗಣೆ ವೆಚ್ಚ ಬಿಟ್ಟು ಟನ್ ಗೆ 3,100 ಬೇಡಿಕೆ
Sugarcane harvest demand 3,100 per ton excluding transportation costs
ಕಬ್ಬು ಕಟಾವು ಸಾಗಣೆ ವೆಚ್ಚ ಬಿಟ್ಟು ಟನ್ ಗೆ 3,100 ಬೇಡಿಕೆ
ಹೂವಿನಹಡಗಲಿ 19 : ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಬಿಟ್ಟು ಪ್ರತಿ ಟನ್ ಕಬ್ಬಿಗೆ ?3100 ದರ ನಿಗದಿಯಾಗಬೇಕು. ಇಲ್ಲದಿದ್ದರೆ ಮೈಲಾರ ಮತ್ತು ವಿಜಯನಗರ ಸಕ್ಕರೆ ಕಾರ್ಖಾನೆ ಬಂದ್ ಮಾಡುತ್ತೇವೆಂದು ರೈತರು ನಿರ್ಧರಿಸಿದ್ದಾರೆ.ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ಜರುಗಿದ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿ, ಕಬ್ಬು ಬೆಳೆಗಾರರ ಸಂಘ ಜಿಲ್ಲಾಧ್ಯಕ್ಷ ರವಿನಾಯ್ಕ ಮತ್ತು ತಾಲೂಕು ಅಧ್ಯಕ್ಷ ಹಾಲೇಶ ಬೆನ್ನೂರು ಮಾತನಾಡಿ, ಕಾರ್ಖಾನೆ ಮಾಲಿಕರು, ರೈತರು ಬೆಳೆದ ಕಬ್ಬಿಗೆ ಸರಿಯಾದ ದರ ನಿಗಧಿ ಮಾಡಿಕೊಂಡು ಸಭೆಗೆ ಬಂದಿಲ್ಲ.ಇತ್ತ ವಿಜಯನಗರ ಕಾರ್ಖಾನೆ ದರ ? 3329 ರೈತ ರಿಗೆ ಒಪ್ಪಿಗೆ ಇಲ್ಲ ಎಂದರು. ಬೀಜ,ರಸಗೊಬ್ಬರ. ಓಷಧಿ ಬೆಲೆ ಮತ್ತು ಕಾರ್ಮಿಕರ ಕೂಲಿ ಹೆಚ್ಚಾಳದಿಂದ ಖರ್ಚು ಹೆಚ್ಚಾಗಿ ಮಾಡಲಾಗಿದೆ. ಈ ಕೂಡಲೇ ಕಾರ್ಖಾನೆ ಯವರು ಮೇಲಾಧಿಕಾರಿಗಳ ಜತೆಗೆ ಚರ್ಚಿಸಿ, ಕಬ್ಬು ಕಟಾವು ಮತ್ತು ಸಾಗಾಣೆ ವೆಚ್ಚ ಬಿಟ್ಟು ?3100 ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಕಾರ್ಖಾನೆ ಗೆ ಬೀಗ ಹಾಕುತ್ತೇವೆಂದು ಎಚ್ಚರಿಸಿದರು. ರೈತ ರು ಮನವಿಯನ್ನು ತಹಶಿಲ್ದಾರರ ಸಂತೋಷ ಕುಮಾರ ಅವರಿಗೆ ಸಲ್ಲಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳವುದಾಗಿ ಹೇಳಿದರು. ಸಭೆಯಲ್ಲಿ ಕೃಷಿ ನಿರ್ದೇಶಕ ಮಹಮ್ಮದ್ ಆಶ್ರ್, ತಾ.ಪಂ.ಹೇಮಂದ್ರಿ ನಾಯ್ಕ, ಮೈಲಾರ ಕಾರ್ಖಾನೆ ರಾಜಕುಮಾರ ಪಾಟೀಲ, ವಿಜಯನಗರ ಕಾರ್ಖಾನೆ ದೇವೀರ್ಪ, ರೈತ ಸಂಘದ ಅದ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಶಿವರಾಜ್ ಹೊಳಗುಂದಿ, ಚಂದ್ರಶೇಖರ ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 