ಗುತ್ತಿಗೆ ಪದ್ದತಿ ರದ್ದುಪಡಿಸುವಂತೆ ಆಗ್ರಹಿಸಿ ಮನವಿ

ಗುತ್ತಿಗೆ ಪದ್ದತಿ ರದ್ದುಪಡಿಸುವಂತೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ವಿಜಯಪುರ: ಜಿಲ್ಲೆಯ ಗುತ್ತಿಗೆ ನೌಕರರು ಇಂದು ನಗರದಲ್ಲಿ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ರ್ಯಾಲಿ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಲಾಯಿತು.  ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ ಜಿಲ್ಲಾ ಸಂಯೋಜಕ ಶ್ರೀನಾಥ ಪೂಜಾರಿ, ಗುತ್ತಿಗೆ ಪದ್ದತಿ ಎನ್ನುವದೆ ಕಾನೂನು ಭಾಹಿರವಾದದ್ದು, ಈ ಪದ್ದತಿ ಸರಕಾರ ರದ್ದುಪಡಿಸಬೇಕು, ಅದನ್ನು ಬಿಟ್ಟು ಸರಕಾರವೇ ಈ ಪದ್ದತಿ ಪೋಷಣೆ ಮಾಡುತ್ತಿರುದು ದುರದೃಷ್ಟಕರ ಎಂದರು. 

ವಿಜಯಪುರ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಮಲಗಿರುವ ಗುತ್ತಿಗೆ ನೌಕರ ಬಂಧುವನ್ನು ಬೆಂಬಲಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು  ಕಪ್ಪುಪಟ್ಟಿ ಧರಿಸಿ ಕೆಲಸವನ್ನು ರಾಜ್ಯಾದ್ಯಂತ ನಿವರ್ಾಹಿಸಿದ್ದಾರೆ. 

ಕೂಡಲೆ ಆರೋಗ್ಯ ಇಲಾಖೆ ಸಚಿವರು ತಮ್ಮ ಜಿಲ್ಲೆಯ ಈ ಘಟನೆ ಗಂಭಿರವಾಗಿ ಪರಿಗಣಿಸಬೇಕು ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದರು, ಪ್ರತಿಭಟನೆ ನೇತೃತ್ವವನ್ನು ಗುತ್ತಿಗೆ ನೌಕರ ಜಿಲ್ಲಾ ಕಾರ್ಯದಶರ್ಿ  ರಾಜು ಬೋರಗಿ,ಗುತ್ತಿಗೆ ನೌಕರ ಜಿಲ್ಲಾ ಉಪಾಧ್ಯಕ್ಷ  ರವಿ ಕಿತ್ತೂರು, ಶಾಂತವಿರ ಕುಂಬಾರ, ಸಿಂದಗಿ ತಾಲೂಕ ಅಧ್ಯಕ ಮಾಂತೇಶ ಬೂದಿ,ಮುದ್ದೇಬಿಹಾಳ ತಾಲೂಕ ಉಪಾಧ್ಯಕ್ಷ  ಸಂತೋಷ ಚವಾಣ್, ವಿಜಯಲಕ್ಷಿ ಹಿರೇಮಠ, ಸದಾನಂದ ಮೋದಿ, ಮಡಿವಾಳಪ್ಪ ಜಂಗಾಣಿ, ಇತರರು ಇದ್ದರು