ರಾಷ್ಟ್ರಮಟ್ಟದ ಸಂಕಲ್ಪ-2026 ರ ಕೈಪಿಡಿ ಮತ್ತು ಭಿತ್ತಿಪತ್ರಗಳ ಬಿಡುಗಡೆ

ರಾಷ್ಟ್ರಮಟ್ಟದ ಸಂಕಲ್ಪ-2026 ರ ಕೈಪಿಡಿ ಮತ್ತು ಭಿತ್ತಿಪತ್ರಗಳ ಬಿಡುಗಡೆ Release of National Resolution-2026 Handbook and Posters


ಧಾರವಾಡ 05 :  ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಇದೇ ಮಾರ್ಚ 27 ಹಾಗೂ 28 ನೇ ತಾರೀಖಿನಂದು ಜರುಗಲಿರುವ ರಾಷ್ಟ್ರಮಟ್ಟದ ಸಂಕಲ್ಪ-2026 ಕಾರ್ಯಕ್ರಮದ ಕೈಪಿಡಿ ಹಾಗೂ ಭಿತ್ತಿಪತ್ರಗಳ (ಪೋಸ್ಟರ್‌ಗಳ) ನ್ನು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳು ಮತ್ತು ಜೆ.ಎಸ್‌.ಎಸ್ ಎಸ್‌.ಎಮ್‌.ಐ ಯು.ಜಿ. ಪಿ.ಜಿ ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಪ್ರೋ. ವೆಂಕಟೇಶ ಮುತಾಲಿಕ್, ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ, ಆರ್‌.ವಿ ಚಿಟಗುಪ್ಪಿ, ವಿವೇಕ ಲಕ್ಷ್ಮೇಶ್ವರ ಜ್ಯೋತಿ ಅಕ್ಕಿ,  ಶೃತಿ ಶೆಟ್ಟಿ ಇತರರು ಉಪಸ್ಥಿತರಿದ್ದರು.