ಗಿಡ ನೆಟ್ಟು ಬೆಳೆಸಿ ಪರಿಸರ ಕಾಪಾಡಿ
ಬ್ಯಾಡಗಿ. 06 : ಮನುಷ್ಯನಿಂದ ಯಾವುದೇ ಅಪೇಕ್ಷೆ ಇಲ್ಲದೆ ಬೆಳೆಯುತ್ತಿರುವ ಗಿಡಗಳು ಪರಿಸರಕ್ಕೆ ಪೂರಕವಾಗಿದೆ ದ್ವೇಷ ಸಾಧಿಸುವ ಜಗತ್ತಿನಿಂದ ಹೊರಬಂದು ಗಿಡಗಳ ಮೇಲೆ ಕಾಳಜಿ ತೋರಿಸಬೇಕು, ಪರಿಸರ ಉಳಿಸುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಅಮೂಲ್ ಜೆ ಹಿರೇ ಕುಡಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಹಾಗೂ ಅರಣ್ಯ ಇಲಾಖೆಯವರ ಸಹಯೋಗ ದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಸಿವಿಲ್ ನ್ಯಾಯಾಧೀಶ ಸುರೇಶ್ ವಗ್ಗರವರ, ಅರಣ್ಯ ಇಲಾಖೆ ಅಧಿಕಾರಿ ಗಿರಿಧರ್ ಜಿ ಕೆ, ಸಹಾಯಕ ಸರ್ಕಾರಿ ಅಭಿಯೋಜಕರು ರಾಜಣ್ಣ ನ್ಯಾಮತಿ,ಕೆ ಆರ್ ಲಮಾಣಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್ ಸಿ ಶೀಡೆನೂರ್ ಉಪಾಧ್ಯಕ್ಷ ಜಿ ಬಿ ಯಲಗಚ್, ಕಾರ್ಯದರ್ಶಿಗಳು ಎಚ್ ಜಿ ಮುಳಗುಂದ, ಎಂ ಎಸ್ ಕುಮ್ಮೂರ, ಹಿರಿಯ ನ್ಯಾಯವಾದಿಗಳಾದ ಬಿಎಸ್ ಚೂರಿ, ಎಂಆರ್ ಹೊಮ್ಮರಡಿ, ಶ್ರೀಮತಿ ಭಾರತಿ ಎಸ್ ಕುಲಕರ್ಣಿ, ಎನ್ ಎಸ್ ಬತ್ತಲ ಕಟ್ಟಿ,,ಸಿ ಜಿ ಹೀರೆಮಠ, ಎಚ್ ಡಿ ಮಡಿವಾಳರ್, ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.