ಸ.ಹಿ.ಪ್ರಾ ಶಾಲೆಗೆ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಒ.ಬಿ.ತಿಮ್ಮಪ್ಪ
O.B. Thimmappa is the new SDMC president
ಕಂಪ್ಲಿ 23ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಕಣವಿತಿಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನೂತನ ಎಸ್ಡಿಎಂಸಿ ರಚಿಸಲಾಯಿತು.
ನೂತನ ಅಧ್ಯಕ್ಷ ಒ.ಬಿ.ತಿಮ್ಮಪ್ಪ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ, ಮೂರು ವರ್ಷದ ಶಾಲಾ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ನಮ್ಮನ್ನು ಸದಸ್ಯರು, ಗ್ರಾಮಸ್ಥರು ನೇಮಕ ಮಾಡಿದ್ದು, ಈ ಸ್ಥಾನದಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದ್ದು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಲಾಗುವುದು. ಇಲ್ಲಿನ ಶಾಲೆಯಲ್ಲಿ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇನ್ನೂ ನಾಲ್ಕು ಹೊಸ ಕೊಠಡಿಗಳ ಅವಶ್ಯಕತೆಯಿದ್ದು, ಮಾನ್ಯ ಶಾಸಕರು, ಅಧಿಕಾರಿಗಳು ಮಕ್ಕಳ ಶೈಕ್ಷಣಿಕ ಮಟ್ಟದ ಹಿತದೃಷ್ಟಿಯಿಂದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಕೋರಿದರು. ಮೂರು ವರ್ಷದ ಅವಧಿಗೆ ನೂತನ ಎಸ್ಡಿಎಂಸಿ ರಚಿಸಿ, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಆಯ್ಕೆ. ಎಸ್.ಡಿ.ಎಮ್.ಸಿ.ಅಧ್ಯಕ್ಷರಾಗಿ.ಒ.ಬಿ.ತಿಮ್ಮಪ್ಪ ಉಪಾಧ್ಯಕ್ಷೆಯಾಗಿ .ಮುಕ್ಕಾರಿ ಈರಮ್ಮ ಸದಸ್ಯರಾದ ಟಿ.ಮಾರೆಪ್ಪ, ಸಣ್ಣ ಮಾರೇಶ, ಎನ್.ಹನುಮೇಶ, ಗಾಡಿ ದೇವಣ್ಣ, ಎನ್ರಾಮಪ್ಪ, ಎನ್ ದುರುಗಮ್ಮ, ಗೌರಮ್ಮ, ಎಂ.ಎನ್.ಪಾರ್ವತಿ, ಅಕ್ಕಿ ಸುರೇಶ, ಜಿ.ಕವಿತಾ, ಜಿ.ರೇಣುಕಮ್ಮ ಜಿ.ಲಕ್ಷ್ಮಿ ವಿರೇಶ, ಹೆಚ್.ಲಿಂಗಪ್ಪ, ಪಾರ್ವತಿ, ಯು.ಮಹೇಶ, ನೀಲಮ್ಮ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಟಿ.ರಾಮಯ್ಯ, ಪ್ರಭಾರಿ ಮುಖ್ಯಗುರು ಎನ್.ವಿಶ್ವನಾಥ, ಶಿಕ್ಷಣ ಪ್ರೇಮಿ ಓರ್.ವಾಯ್. ವಿರೇಶ ಸಹ ಶಿಕ್ಷಕ ಪರಶುರಾಮ, ಮುಖಂಡರಾದ ತಳವಾರ ರಾಮಲಿಸ್ವಾಮಿ, ಉಳ್ಳೂರು ಪಕ್ಕೀರ್ಪ, ಎಂ.ಶಿವಪ್ಪ, ಅಕ್ಕಿ ರೇಣುಕಪ್ಪ, ಎನ್.ಯಂಕಪ್ಪ, ಎನ್.ವಿರೇಶ, ಓರಾ್ಬಯಿ ಅಂಜಿನಪ್ಪ, ಪಿ.ಲಿಂಗಪ್ಪ, ಶಿಕ್ಷಣ ಪ್ರೇಮಿ ಓರಾ್ಬಯಿ ವಿರೇಶ ಸೇರಿದಂತೆ ಸಹ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 