ಎಂಎಸ್ಪಿ: ಜಗಜಿತ್ಸಿಂಗ್ದಲ್ಲೆವಾಲ್ ಜೀವ ಉಳಿಸಲು ಒತ್ತಾಯ
MSP: Jagjitsingh Dallewal urged to save life
ಎಂಎಸ್ಪಿ: ಜಗಜಿತ್ಸಿಂಗ್ದಲ್ಲೆವಾಲ್ ಜೀವ ಉಳಿಸಲು ಒತ್ತಾಯ
ಹೊಸಪೇಟೆ 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ, ಹೊಸಪೇಟೆ ಕೇಂದ್ರ ಸರ್ಕಾರ ವಿರುದ್ಧ ಇಲ್ಲಿಯವರೆಗೆ 45 ದಿನಗಳಿಂದ ಉಪವಾಸ ನಡೆಸುತ್ತಿರುವ ರೈತ ನಾಯಕರಾದ ಜಗಜಿತ್ಸಿಂಗ್ ದಲ್ಲೆವಾಲ್ ಅವರು ರೈತರು ಬೆಳೆಯುವ ಬೆಳೆಗಳಿಗೆ ಅವರು ಎಂ.ಎಸ್.ಪಿ. ಕನಿಷ್ಠ ಬೆಂಬಲ ಬೆಲೆ ಡಾಽಽ ಎಂ.ಎಸ್.ಸ್ವಾಮಿನಾಥ ಅವರ ವರದಿಯ ಪ್ರಕಾರ ಸಿ2+50 ಮಾನದಂಡ ಅಧಾರವಾಗಿ ಹಾಗೂ ಶಾಸನಬದ್ಧವಾಗಿ ಜಾರಿಗೊಳಿಸಲು ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಅವರಿಗೆ ಏನಾದರೂ ಅಪಾಯವಾದರೆ ಇದಕ್ಕೆ ಕೇಂದ್ರ ಸರ್ಕಾರ ಹೊಣೆಗಾರಿಕೆ ಹೋರಬೇಕಾಗುತ್ತದೆ ಎಂದು ಎಚ್ಚರಿಕೆ ಮುಟ್ಟಿಸಲು ನಾವು ಇಂದು ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಎಚ್ಚರಿಕೆ ಮುಟ್ಟಿಸಲು ಮನವಿ ಪತ್ರ ಕೊಡಲು ಪ್ರಧಾನಿ ರೈತರ ಜೊತೆ ಹುಡುಗಾಟಿಕೆ ನಡೆಸುತ್ತಿದ್ದಾರೆ. ಇದಲ್ಲದೆ ರೈತರ ಮೂಗಿಗೆ ತುಪ್ಪ ಸವರಿ ತಮಾಷೆ ಮಾಡುತ್ತಿದ್ದಾರೆ. ಇದು ರೈತರಿಗೆ ವಿರೋಧವಾಗಿದ್ದು ಇದನ್ನು ಖಂಡಿಸುತ್ತಿದ್ದೇವೆ. ಇದೆಲ್ಲ ರೈತರು ಬೆಳೆದ ಬೆಳೆಗಳಿಗೆ ಎಂ.ಎಸ್.ಪಿ. ಶಾಸನ ಬದ್ಧ ಜಾರಿಗೊಳಿಸಿ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಆರ್.ಆರ್ ತಾಯಪ್ಪ, ಕೆ.ಜಹಿರುದ್ದೀನ್, ದೊಡ್ಡಗಾಳೆಪ್ಪ, ಅಯ್ಯಣ್ಣ, ಕೆ.ಮೂರ್ತಿ, ಕೆ.ಹೇಮರೆಡ್ಡಿ, ಹೆಚ್.ಪಿ.ನಾಗರಾಜ, ಜಿ.ಗೋವಿಂದಪ್ಪ, ಜಿ.ಬಸವರಾಜ, ರಾಮಾಂಜಿನಿ, ಹಾಗೂ ಇನ್ನಿತರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಭಾಗವಹಿಸಿ ಮನವಿ ಪತ್ರ ಸಲ್ಲಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 