ಕರಾವಳಿ ಉತ್ಸವ ಆರನೇ ದಿನ: ಮಿಂಚಿದ ಗಾಯಕ ಮಹಮ್ಮದ್ ದಾನಿಷ್
Karavali Utsav Day 6: Singer Mohammed Danish shines
ಕಾರವಾರ 28: ಕರಾವಳಿ ಉತ್ಸವ ಆರನೇ ದಿನ ಪ್ರಸಿದ್ದ ಗಾಯಕ ಮಹಮ್ಮದ್ ದಾನಿಷ್ ಸೂಫಿ ಹಾಡು ಹಾಗೂ ಕವ್ವಾಲಿ ಮಾದರಿಯ ಹಾಡುಗಳನ್ನು ಹಾಡಿ ಮಿಂಚಿದರು. ಅಪ್ಪಟ ಹಿಂದೂಸ್ತಾನಿ ಪ್ರತಿಭೆಯಾದ ದಾನಿಷ್ ಹಿಂದೂಸ್ತಾನಿ ಸಂಗೀತದ ಮಹತ್ವವನ್ನು ಹಾಡುಗಳ ಮೂಲಕ ಸಾರಿದರು. ಮೊಘಲ್ ಮತ್ತು ಸುಲ್ತಾನರ ಕಾಲದ ಹಿಂದೂಸ್ತಾನಿ ಸಂಗೀತದ ಸುಧೆಗೆ ಅವರು ಪ್ರೇಕ್ಷಕರನ್ನು ಕರೆದೊಯ್ದರು. ಕರಾವಳಿ ಉತ್ಸವದಲ್ಲಿ ಎಲ್ಲಾ ದಿನಗಳ ಸಂಗೀತ ಕಾರ್ಯಕ್ರಮಕ್ಕಿಂತ ಐದನೇ ದಿನ ಯುವಕ ಯುವತಿಯರ ಉತ್ಸಾಹ ನೂರ್ಮಡಿಸಿತ್ತು. ಸಾಗರದಂತಿದ್ದ ಜನ ಸಮೂಹ ಕಂಡು ಗಾಯಕ ದಾನಿಷ್ ಅತ್ಯುತ್ಸಾಹದಲ್ಲಿ ಹಾಡುಗಳನ್ನು ಹಾಡಿದರು. ಹಾಡಿನ ಜೊತೆಗೆ ಅವರ ನೃತ್ಯ ಹಾಗೂ ಭಾವಾಭಿನಯ ಯುವತಿಯರ ಮನ ಕದಿಯಿತು. ಲಗನ್ ಲಗೀ, ಆಖೀರ್ ತಬ್ ಅಪ್ನೆ, ಅಪ್ನೆ ತೋ ಅಪ್ನೆ ಹೋತಾ ಹೈ , ದಿಲ್ ಜೋ ಮಿಲೇ ಮಿಲೇಯಿ ರಹೇ, ಆಕೀರ್ ಫಿರ್ ಆನಾ ಹೈ, ಹೋಜಾಯಿಗಾ ಬಲ್ಲೆ ಬಲ್ಲೆ.. ಹಾಡುಗಳನ್ನು ಹಾಡಿ ರಂಜಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 