ಜೋರಾಯ್ತು ಹಬ್ಬದ ಖರೀದಿ ವ್ಯಾಪಾರಸ್ಥರಲ್ಲಿ ಸಂತಸ
ದಾಂಡೇಲಿ 06: ನಗರದ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜನಸಾಮಾನ್ಯರು ಹಬ್ಬದ ವಸ್ತುಗಳ ಖರೀದಿಗೆ ಸಂತಸದಿಂದ ಮಾರುಕಟ್ಟೆಗೆ ಧಾವಿಸುತ್ತಿರುವುದು ಸವರ್ೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಮುಖ್ಯವಾಗಿ ಹೂವು ಹಾಗೂ ಹಣ್ಣುಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದು ಗ್ರಾಹಕರು ಬೆಲೆ ತುಸು ಹೆಚ್ಚಾದರು ಸಹ ಸಂತಸದಿಂದ ಖರೀದಿಗೆ ಮುಂದಾಗುತ್ತಿರುವುದು ವ್ಯಾಪಾರಸ್ಥರಲ್ಲಿ ಸಂತಸ ಮೂಡುವಂತೆ ಮಾಡಿದೆ.
ಚೆಂಡು ಹೂವು, ಸೆವಂತಿ ಹೂವು, ಕಮಲದ ಹೂವು, ಚೆಂಡು ಹೂವಿನ ಗಿಡ, ಬಾಳೆ ಸಸಿಗಳು, ಕಬ್ಬು ಮುಂತಾದವುಗಳ ಖರೀದಿಗೆ ಗ್ರಾಹಕರು ಸಂತಸದಿಂದ ಮುಗಿಬಿಳುತ್ತಿದ್ದಾರೆ. ಜೊತೆಯಲ್ಲಿ ವಿವಿಧ ರೀತಿಯ ಬಣ್ಣ ಬಣ್ಣದ ಆಕಾಶ ದೀಪಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದು ಮಾರುಕಟ್ಟೆಯ ಸೊಬಗು ಹೆಚ್ಚಿಸುವಂತೆ ಮಾಡಿದೆ. ಮನೆಗೆ ಬಂದ ಅತಿಥಿಗಳೊಂದಿಗೆ ಬಟ್ಟೆ ಖರೀದಿಗೂ ಹಾಗೂ ದಿನಸಿ ವಸ್ತುಗಳ ಖರೀದಿಗೂ ಗ್ರಾಹಕರು ಮಾರುಕಟ್ಟೆಗೆ ಆಗಮಿಸುತ್ತಿರುವುದರಿಂದ ಮಾರುಕಟ್ಟೆಯು ಜನನಿ ಬಿಡ ಪ್ರದೇಶವಾಗಿ ಗೋಚರಿಸುತ್ತಿದ್ದು ಹಳ್ಳಿಯಿಂದ ಬಂದು ವ್ಯಾಪಾರ ಮಾಡುವ ವ್ಯಾಪಾರಸ್ಥರು ಸಹ ಸಂತಸ ಗೊಳ್ಳುವಂತೆ ಮಾಡಿದೆ.
ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುವ ಬೆಳಕಿನ ಹಬ್ಬ ದೀಪಾವಳಿಗೆ ನಗರದ ಮಾರುಕಟ್ಟೆಗೆ ಹೆಂಗಳೆಯರು ಸಹ ವಿವಿಧ ಆಲಂಕಾರಿಕ ವಸ್ತುಗಳನ್ನು ಖರೀದಿಗೆ ಮುಂದಾಗುತ್ತಿದ್ದಾರೆ.
ಜೊತೆಯಲ್ಲಿ ಬಂದ ಪುಟ್ಟ ಪುಟ್ಟ ಮಕ್ಕಳಿಗಾಗಿ ಪಟಾಕಿಗಳನ್ನು ಖರೀದಿಸುತ್ತಿರುವುದರಿಂದ ಅಲಂಕಾರಿಕ ಹಾಗೂ ಪಟಾಕಿಗಳ ವ್ಯಾಪಾರಸ್ಥರು ಸಹ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯಂದು ತುಸು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿರುವುದಂತು ಸತ್ಯ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 