ಐಜಿಪಿ ನಂಜುಂಡಸ್ವಾಮಿಗೆ ಸನ್ಮಾನ
ಲೋಕದರ್ಶನ ವರದಿ
ಕೊಪ್ಪಳ 16: ಪಕ್ಕದ ರಾಯಚೂರು ಜಿಲ್ಲೆಯ, ರಾಯಚೂರು ನಗರದಲ್ಲಿರುವ ಎಸ್ಪಿ ಕ್ರೀಡಾಂಗಣದಲ್ಲಿ ಮಂಗಳವಾರ ರಂದು ಜರುಗಿದ ಪೋಲಿಸ್ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಲಿಸ್ ಇಲಾಖೆಯ ಬಳ್ಳಾರಿ ವಲಯ ಐಜಿಪಿಯವರಾದ ಎಂ. ನಂಜುಂಡಸ್ವಾಮಿಯವರಿಗೆ ನ್ಯೂಸ್ ಮೀಡಿಯಾ ಅಸೊಸಿಯೆಷನ್ ನಿರ್ದೇಶಕ ಎ.ಮೊಹಮ್ಮದ್ ರಫಿ ನೇತೃತ್ವದ ತಂಡ ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಇದೇ ದಿ. 27ರಂದು ಬೆಂಗಳೂರಿನ ಸಿಟಿ ಸೆಂಟ್ರೆಲ್ ಹಾಲ್ನಲ್ಲಿ ನಡೆಯುವ ಅಸೋಸಿಯೆಷನ್ನ 3ನೇ ವಾಷರ್ಿಕೊತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.
ಪೋಲಿಸ್ ಇಲಾಖೆಯ ಬಳ್ಳಾರಿ ವಲಯ ಐಜಿಪಿಯವರಾದ ಎಂ.ನಂಜುಂಡಸ್ವಾಮಿಯವರು ಅಸೊಸಿಯೆಷನ್ ವತಿಯಿಂದ ಸನ್ಮಾನ ಮತ್ತು ಆಮಂತ್ರಣ ಸ್ವೀಕರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜಾಪುರ ಸಾಹೆಬ್, ಅಬ್ದುಲ್ ರೆಹ್ಮಾನ, ವಸೀಮ್ ರಝ್ವಿ, ಅಜೀಮುದ್ದಿನ್, ಸಾದಿಕ್ ಹುಸೇನ್, ಸುಹೇಲ್ ಹುಸೇನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 