ಬೆಳಗಾವಿ: ಆರೋಗ್ಯ ತಪಾಸಣಾ ಶಿಬಿರ
ಲೋಕದರ್ಶನ ವರದಿ
ಬೆಳಗಾವಿ 19: ನಗರದ ಜೈನ್ ಪಾಲಿಟೆಕ್ನಿಕ್ನ ಎನ್ಎಸ್ಎಸ್ ಘಟಕ ಖಾನಾಪುರ ತಾಲೂಕು ಗಣೆಬೈಲ್ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಿಶೇಷ ಶಿಬಿರದಲ್ಲಿ ಬೆಳಗಾವಿಯ ಬಿಎಚ್ಎಸ್ ಲೇಕ್ವ್ಯೂವ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಗ್ರಾಮದ ನೂರಾರು ನಾಗರಿಕರು ಪಡೆದುಕೊಂಡರು.
ನಾಗರಿಕರು ಅನುಸರಿಸಬೇಕಾದ ಆಹಾರ ಕ್ರಮ, ವ್ಯಾಯಾಮ, ತೂಕ ನಿಯಂತ್ರಣ ಸೇರಿದಂತೆ ಇತರ ಆರೋಗ್ಯಕರ ಚಟುವಟಿಕೆಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಮೂಳೆ ಚಿಕಿತ್ಸೆ, ಬಂಜೇತನ ಸೇರಿದಂತೆ ಇತರ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಲೇಕ್ವ್ಯೂವ್ ಆಸ್ಪತ್ರೆಯ ಆತರ್ೋಪೆಡಿಕ್ ಸರ್ಜನ್ ಡಾ. ಬಸವರಾಜ ಪಾಟೀಲ, ಡಾ. ಜಯಶ್ರೀ ಪಾಟೀಲ ಹಾಗೂ ಸಿಬ್ಬಂದಿ 120ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಪ್ರಾಚಾರ್ಯ ವಿಜಯ ಕಲ್ಮಣಿ, ಡಾ. ಆನಂದ ಬಿಂಗೆ, ವಷರ್ಾ ದೇಸಾಯಿ, ಸಾತೇರಿ ನಾರಾಯಣ ಗುರವ, ಭೈರು ಗುರವ, ಡಾ. ಕಣನಾಥ್ ಶೆಟ್ಟಿ, ಡಿ ಕಾತರ್ಿ ಗುಣ, ವಾಸುದೇವ್, ಡಾ. ಗುರುಪ್ರಸಾದ ಹಗರ, ಪ್ರೊ. ಬಲರಾಮ ಕಾಮ್ಕರ, ಪ್ರೊ. ಸೂರಜ್ ಸುತಾರ, ಪ್ರೊ. ಪ್ರಕಾಶ ಸೋನ್ವಾಲ್ಕರ ಮತ್ತಿತರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 