ವಿಶ್ವ ತಂಬಾಕು ದಿನಾಚರಣೆ ಜಾಗೃತಿ ಜಾತಾ: ಡಾ. ಶ್ರೀಶೈಲ ಹುಕ್ಕೇರಿ ಚಾಲನೆ

World No Tobacco Day Awareness Rally: Dr. Srishaila Hukkeri inaugurates

ತಾಳಿಕೋಟಿ 02: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾತಕ್ಕೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.  

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಲೋಟಸ್ ಡಿ- ಫಾರ್ಮಸಿ ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಜಾತಕೆ ಚಾಲನೆ ನೀಡಿ ಮಾತನಾಡಿದವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸಬೇಕು ಎಂದರು.  

ಯುವ ವೈದ್ಯ ಡಾ.ಅಗರವಾಲ ಮಾತನಾಡಿ ಇತ್ತೀಚಿನ ದಿನಗಳಲ್ಲಿ 30-40 ಹರೆಯದವರಿಗಿಂತ ಹೆಚ್ಚಾಗಿ ಯುವಕರೆ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನು ಸೇವಿಸುತಿದ್ದಾರೆ. ಯುವಕರಿಗೆ ಅದರಿಂದ ಹಾಗುವ ಹಾನಿ,ತೊಂದರೆಗಳನ್ನು ಅರ್ಥಮಾಡಿಸಲು ಈ ದಿನ ಒಂದು ಪ್ರಯತ್ನ ಇದನ್ನು ವಿಶ್ವದಾದ್ಯಂತ ಆಚರಿಸುತ್ತಾರೆ. ತಂಬಾಕು ಸೇವನೆಯಿಂದ ಆಗುತ್ತಿರುವ ಸಾವಿನ ಸಂಖ್ಯೆಯು ಹೆಚ್ಚುತ್ತಲೇ ಇದೆ. ಇದರ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.  

ಆರೋಗ್ಯ ನೀರೀಕ್ಷಕ ಮುಜಾಹಿದ್ ನಮಾಜಕಟ್ಟಿ ಮಾತನಾಡಿ ತಂಬಾಕು ವಿಶ್ವವು ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇಂದು ವಿಶ್ವದಾದ್ಯಂತ ವರ್ಷಕ್ಕೆ 8 ದಶಲಕ್ಷಕ್ಕೂ ಹೆಚ್ಚು ಜನರ ಜೀವಗಳು ಬಲಿಯಾಗುತ್ತಿವೆ ಈ ಸಾವುಗಳಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ನೇರ ತಂಬಾಕು ಸೇವನೆಯ ಪರಿಣಾಮದಿಂದ ಸಂಭವಿಸುತ್ತೇವೆ, ಮತ್ತು ಸುಮಾರು 1.2 ಮಿಲಿಯನ್ ಧೂಮಪಾನಿಗಳಲ್ಲದವರು ಸೆಕೆಂಡ್ ಹ್ಯಾಂಡ್ ಧೂಮಪಾನಕ್ಕೆ ಗುರಿಯಾಗುತ್ತಾರೆ. ಇದರ ಭಯಾನಕ ಪರಿಣಾಮಗಳ ಕುರಿತು ಜಾಗೃತಿ ಅತಿ ಅವಶ್ಯಕವಾಗಿದೆ ಎಂದರು.  

ಜಾತಾ ಸಮುದಾಯ ಆರೋಗ್ಯ ಕೇಂದ್ರದ ಆವರಣದಿಂದ ಆರಂಭವಾಗಿ ನಾನಕಡೆಗಳಲ್ಲಿ ಸಂಚರಿಸಿ ಶಿವಾಜಿ ವೃತ್ತಕ್ಕೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಬಸವರಾಜ್ ಖಏಖಏ ಆಪ್ತ ಸಮಾಲೋಚಕರು, ಕಾಂಚನ ಪಾಟೀಲ್ ಊಠ, ಸಿದ್ದಮ್ಮ ಬ್ಯಾಲ್ಯಾಳ ಎನ್ ಸಿ ಡಿ ಆಪ್ತ ಸಮಾಲೋಚಕರು, ಎಫ್ ಏ ಅತ್ತಾರ್, ಬಿಎಸ್ ಶಿವಯೋಗಿಮಠ, ಲೋಟಸ್ ಕಾಲೇಜ್‌ನ ಉಪಾಧ್ಯಕ್ಷ ಮುಜಾಹಿದ್ ನಮಾಜಕಟ್ಟಿ, ಕಾರ್ಯದರ್ಶಿ ನೂರ ನಮಾಜ ಕಟ್ಟಿ, ಲೋಟಸ್ ಫಾರ್ಮಸಿ ಕಾಲೇಜ್ ಪ್ರಾಚಾರ್ಯ ಡಾ. ಸಿರಾಜ್ ಚೌದರಿ, ಉಪನ್ಯಾಸಕ ಡಾ.ಇಮ್ತಿಯಾಜ, ಡಾ.ಇಲಿಯಾಸ್, ರವಿಕುಮಾರ, ಈಶ್ವರಿ ರಾಥೋಡ, ನೂರಜಹಾನ್, ನಜ್ಮಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಲೋಟಸ್ ಫಾರ್ಮಸಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಇತ್ತೀಚಿನ ಸುದ್ದಿ