ವಿಜಯಪುರ: ಸತೀಶ ಬಂಡಿವಡ್ಡರಗೆ ಸಮಾಜ ಸೇವಾ ರತ್ನ ಪ್ರಶಸ್ತಿ
ಲೋಕದರ್ಶನ ವರದಿ
ವಿಜಯಪುರ 02: ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕರ್ನಾಟಕ ಸರಕಾರ, ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ಮುಧೋಳದ ಸಮಾಜ ಸೇವಕರಾದ ಸತೀಶ ಬಂಡಿವಡ್ಡರ ಅವರಿಗೆ ಲಭಿಸಿದೆ.
ಶಿಕ್ಷಣವೇ ಸಂಜೀವಿನಿ ಹಾಗೂ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಸತೀಶ ಬಂಡಿವಡ್ಡರ ಇವರು ಹತ್ತಾರು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ವಿದ್ಯಾರ್ಥಿಗಳಿಗಾಗಿ ದೈಹಿಕ ಆರೋಗ್ಯ ಹಾಗೂ ಮಾನಸಿಕ ಶಾಂತಿಗಾಗಿ ಶಾಲಾ ಕಾಲೇಜುಗಳಲ್ಲಿ 'ಧ್ಯಾನ ಜಾಗೃತಿ ಅಭಿಯಾನ' 'ಪ್ರತಿಭಾ ಪುರಸ್ಕಾರ' ವಿದ್ಯಾರ್ಥಿಗಳಿಗಾಗಿ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ 5 ರೂಪಾಯಿಯಲ್ಲಿ ಉಪಹಾರ ದೊರೆಯುವ ಕ್ಯಾಂಟಿನ್ಗಳು ವಿಕಲಚೇತನ ಹಾಗೂ ಅನಾಥ ಆಶ್ರಮಗಳಿಗೆ ಸಹಾಯ ಸಹಕಾರ ಹಾಗೂ ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣೆ ಸಾರ್ವಜಿನಕ ಸ್ಥಳಗಳಲ್ಲಿ ಹತ್ತಾರು ಕಡೆ ಶುದ್ದ ಕುರಿಯುವ ನೀರಿನ ಅರವಟ್ಟಿಗೆಗಳು, ನಿರುದ್ಯೋಗ ಯುವಕ ಯುವತಿಯರಿಗಾಗಿ ಸ್ವ-ಉದ್ಯೋಗ ತರಬೇತಿಗಳು ವಿಶéೇಷವಾಗಿ ಪರಿಸರ ರಕ್ಷಣೆ ಜಾಗೃತಿಗಾಗಿ ಕ್ಷೇತ್ರಾದ್ಯಂತ 'ಮನೆಗೊಂದು ಮರ' ಅಭಿಯಾನದ ಅಡಿಯಲ್ಲಿ 1 ಲಕ್ಷ ಹಣ್ಣಿನ ಸಸಿಗಳನ್ನು ನಡೆಸಿದ್ದು ಹಾಗೂ ಗ್ರಾಮೀಣ (ಗಾಯಕರನ್ನು) ಪ್ರತಿಭೆಗಳಿಗೆ ತರಬೇತಿ ಶಿಬಿರಗಳು, ಅನ್ನದಾತರಿಗಾಗಿ 'ಕಬ್ಬು ಬೆಳೆಯಲು ಆಧುನಿಕ ತಂತ್ರಜ್ಞಾನ' ಮತ್ತು ಇನ್ನೂ ವಿಶೇಷವಾಗಿ 'ವಿಶ್ವ ರೈತ ದಿನಾಚರಣೆ' ಆಚರಿಸಿ ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯ,ಸರ್ಕಾರಿ ಸೌಲಭ್ಯಗಳಾದ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮುಂತಾದ ಸರ್ಕಾರಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸಲು ಗ್ರಾಮೀಣ ಬಾಗಗಳಲ್ಲಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ.
ಶಿಕ್ಷಣ, ಕಲೆ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಕನ್ನಡ ನಾಡ ನುಡಿ ಸಂಸ್ಕೃತಿಗೆ ಸಲ್ಲಿಸಿರುವ ಶೃದ್ದಾಪೂರ್ವಕ ಯಥಾ ಶಕ್ತಿ ಸೇವೆಯನ್ನು ಹಾಗೂ ಕೊಡುಗೆ ನೀಡಿದ ಪ್ರಯುಕ್ತ ನಾಡಿಗಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಅನುಲಕ್ಷಿಸಿ ಗೌರವಿಸಿ ಸನ್ಮಾನಿಸಿ ಇವರಿಗೆ ದಿನಾಂಕ 03-06-2019 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ "ಸಮಾಜ ಸೇವಾ ರತ್ನ ಪ್ರಶಸ್ತಿ" ಪ್ರಧಾನ ಮಾಡಲಾಗುವುದು. ತಮ್ಮ ಸೇವೆ ಜೀವನ ಪರ್ಯಂತ ಮಾನವ ಧರ್ಮಕ್ಕೆ ಮೀಸಲಾಗಿರಲೆಂದು ಆಶಿಸಿ ಸ್ಪೂತರ್ಿಸುತ್ತೇವೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಪ್ಪ ದಡ್ಡಿಮನಿ ತಿಳಿಸಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 