ಗುರುವಿನ ದಾಸನಾದರೆ ಯಶಸ್ಸು ಸಾಧ್ಯ: ಶೀತಲ ಮೆಕನಮರಡಿ
ಲೋಕದರ್ಶನ ವರದಿ
ಬೆಳಗಾವಿ05: ಆಧುನಿಕ ತಂತ್ರಜ್ಞಾನ ತಕ್ಕಂತೆ ವಿದ್ಯಾಥರ್ಿಗಳು ಬೆಳೆಯುವ ಅಗತ್ಯವಿದೆ. ದೇಶದ ಉತ್ತಮ ನಾಗರಿಕನಾಗಿ ಬೆಳೆದು ತಂದೆ-ತಾಯಿಯರ ಹೆಸರು ತರಬೇಕು. ಅದಕ್ಕಾಗಿ, ಗುರುವಿನ ದಾಸನಾದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಶೀತಲ್ ಟುಟೋರಿಯಲ್ಸ್ ಅಧ್ಯಕ್ಷರಾದ ಶೀತಲ ಮೆಕನಮರಡಿ ಅಭಿಪ್ರಾಯ ವ್ಯಕ್ತಪಡಿದರು.
ಸ್ಥಳೀಯ ಮಜಗಾವಿ ಶೀತಲ್ ಟುಟೋರಿಯಲ್ಸ್ ವತಿಯಿಂದ ಆಯೋಜಿಸಲಾಗಿದ್ದ ಶುಕ್ರವಾರ 05 ರಂದು 2018-19 ನೇ ಸಾಲಿನ ಹತ್ತನೇಯ ತರಗತಿಯ ವಿದ್ಯಾಥರ್ಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮ ಓದಿಗಾಗಿ ಕುಟುಂಬಸ್ಥರು ಶ್ರಮವಹಿಸುತ್ತಾರೆ. ಅದಕ್ಕೆ, ಪ್ರತಿಫಲ ತರುವ ಮಕ್ಕಳು ನೀವಾಗಬೇಕು, ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ವಿದ್ಯಾಥರ್ಿಗಳಿಗೆ ಪಿಯುಸಿ ಅಂತಿಮ ಘಟ್ಟವಾಗಿರುತ್ತದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಓದಿನತ್ತ ಗಮನ ಹರಿಬೇಕು. ವಿದ್ಯಾಥರ್ಿಗಳಿದ್ದಾಗಲೇ ಜೀವನದಲ್ಲಿ ಗುರಿ ಇಟ್ಟಕೊಂಡು ಸಾಧನೆಯ ಹಾದಿಯನ್ನು ತುಳಿಯಬೇಕು. ಅದಕ್ಕೆ ನಿಮ್ಮ ಸತತ ಪ್ರಯತ್ನ ತುಂಬಾ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರಕಾಶ ಪವಾರ, ಸಾಗರ ಗುಮಾಜಿ, ಶಶಿಕಾಂತ ಕಾಂಬಳೆ, ಹಾಗೂ ಪದ್ಮರಾಜ ಬಸ್ತವಾಡ, ಮಹಾಲಿಂಗ, ಬಾಪೂ ಸಾತಗೌಡ ಹಾಗೂ ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 