ಎರಡನೇ ದಿನ ನಿಗದಿಯಿಂದ ಪಾದಯಾತ್ರೆ ಆರಂಭ
ಧಾರವಾಡ 29: ಸುಕ್ಷೇತ್ರ ಗರಗ ಮಡಿವಾಳೇಶ್ವರ ಕಲ್ಮಠದ ಆವರಣದಿಂದ ಸುಕ್ಷೇತ್ರ ಉಳವಿಯವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಎರಡನೇ ದಿನವೂ ಯಶಸ್ವಿಯಾಗಿ ನಡೆಯಿತು.
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಪತ್ನಿ ಪ್ರಿಯಾ ದೇಸಾಯಿ ಸೇರಿದಂತೆ ಸಾವಿರಾರು ಸದ್ಭಕ್ತರು ಎರಡನೇ ದಿನ ಶುಕ್ರವಾರ ನಿಗದಿ ಗ್ರಾಮದಿಂದ ಪಾದಯಾತ್ರೆಯನ್ನು ಮುಂದುವರೆಸಿದರು.
ಪಾದಯಾತ್ರೆ ಆರಂಭಕ್ಕೂ ಮುನ್ನ ನಿಗದಿ ಗ್ರಾಮಸ್ಥರು ಶಾಸಕ ಅಮೃತ ದೇಸಾಯಿ ಅವರಿಗೆ ಹೃದಯಸ್ಪಶರ್ಿ ಬೀಳ್ಕೊಡುಗೆ ನೀಡಿದರು.
ಬಳಿಕ ಎರಡನೇ ದಿನದ ಪಾದಯಾತ್ರೆಯೂ ನಿಗದಿಯಿಂದ ಆರಂಭಗೊಂಡು ರಾತ್ರಿಯವರೆಗೆ ನಡೆದು, ಬಳಿಕ ಹಳಿಯಾಳ ಕಕರ್ಾ ಟ್ಯಾಂಕ್ ಬಳಿ ಅಂತ್ಯಗೊಳಿಸಿ ಅಲ್ಲಿಯೇ ವಾಸ್ತವ್ಯ ಮಾಡಿದರು.
ಮಡಿವಾಳೇಶ್ವರ ಮಠದ ಟ್ರಸ್ಟ ಕಾರ್ಯಧ್ಯಕ್ಷ ಅಶೋಕ ದೇಸಾಯಿ, ಧಾರವಾಡ ಹಾಲು ಒಕ್ಕೂಟದ ನಿದರ್ೇಶಕ ಶಂಕರ ಮುಗದ, ಗರಗ ಮತ್ತು ಹಂಗರಕಿ ಗ್ರಾಮದ ನೂರಾರು ಗುರು ಹಿರಿಯರು ಹಾಗೂ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಹರ ಹರ ಮಹಾದೇವ, ಗರಗ ಮಡಿವಾಳೇಶ್ವರ ಮಹಾರಾಜಕೂ ಜೈ, ಉಳವಿ ಚನ್ನಬಸವೇಶ್ವರ ಮಹಾರಾಜಕೂ ಜೈ ಎಂದು ಘೋಷಣೆಗಳು ಮುಗಿಲು ಮುಟ್ಟಿದ್ದವು .
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 