ಬಿಸಿಲಿನ ತಾಪಕ್ಕೆ ತಂಪು ತಂದ ಮಳೆ
The rain brought coolness to the hot sun
ಹನಮಸಾಗರ 25: ಸಂಜೆ ಗುಡುಗು ಸಹಿತ ಅರ್ಧಗಂಟೆ ಮಳೆಯ ಆನಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಬಿಸಿಲಿನ ತಾಪ ವಿಪರೀತವಾಗಿ ಹೆಚ್ಚಾಗಿ ಜನಜೀವನಕ್ಕೆ ತೊಂದರೆಯನ್ನುಂಟುಮಾಡಿತ್ತು. ಉರಿ ಬಿಸಿಲಿನಿಂದ ಜನರು ತತ್ತರಿಸಿ ನೆರಳು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗಿ ರಸ್ತೆಗಳು ಸುಮ್ಮನೆ ಖಾಲಿಯಾಗಿದ್ದವು.ಆದರೆ ಸಂಜೆ ಸುಮಾರು 4:00 ಗಂಟೆಯ ಸುಮಾರಿಗೆ ವಾತಾವರಣದಲ್ಲಿ ಆಕಸ್ಮಿಕ ಬದಲಾವಣೆ ಕಂಡುಬಂದಿತು. ಆಕಾಶದಲ್ಲಿ ಮೋಡಗಳು ಕವಿದು, ಗುಡುಗು-ಸಿಡಿಲಿನೊಂದಿಗೆ ಮೊದಲಿಗೆ ಜಿಟಿ ಜಿಟಿಯಾಗಿ ಮಳೆ ಸುರಿಯಲು ಪ್ರಾರಂಭವಾಯಿತು.
ಬಳಿಕ ಮಳೆಯ ತೀವ್ರತೆ ಸ್ವಲ್ಪ ಹೆಚ್ಚಾಗಿ, ಸಾಧಾರಣ ಮಳೆಯಾಗಿ ಸುಮಾರು ಅರ್ಧ ಗಂಟೆಯ ಕಾಲ ನಿರಂತರವಾಗಿ ಸುರಿಯಿತು.ಈ ಮಳೆಯಿಂದ ದಿನಪೂರ್ತಿ ಕಾಡಿದ ಬಿಸಿಲಿನ ತಾಪಕ್ಕೆ ತಂಪು ತಂದುಕೊಟ್ಟಿತು. ತಾಪಮಾನ ಇಳಿಕೆಯಾಗಿದ್ದು, ವಾತಾವರಣ ಸುಸಹ್ಯವಾಗಿ ಮಾರ್ಪಟಟಿತು. ಜನರು ಉಸಿರಾಡುವಂತೆ ತಂಪಾದ ಹವಾಮಾನ ಅನುಭವಿಸಿದರು. ರೈತರು ಸಹ ಈ ಮಳೆಯಿಂದ ಸಂತಸಗೊಂಡಿದ್ದು, ಬೆಳೆಗಳಿಗೆ ಇದು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೋಟೊ ಬುಧುವಾರ ಸಾಯಂಕಾಲ ಹನುಮಸಾಗರದಲ್ಲಿ ಮಳೆಬರುತ್ತಿರುವಾಗ ಪುಟ್ಟ ಮಗು ಕೊಡೆ ಹಿಡಿದು ಆಟವಾಡುತ್ತಿರುವದು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 