ಮೈನವಿರೇಳಿಸಿದ ಕಂಚಾವೀರರ ಶಸ್ತ್ರ ಪವಾಡಗಳು
The amazing feats of Kanchaveera's weapons
ಹೂವಿನಹಡಗಲಿ 06: ಸುಕ್ಷೇತ್ರ ಮೈಲಾರಮೈಲಾರಲಿಂಗೇಶ್ವರ ಜಾತ್ರೆಯ ಎರಡನೇ ದಿನ ಗುರುವಾರ ಮಧ್ಯಾಹ್ನ 3ಗಂಟೆಗೆ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ನೇತೃತ್ವದಲ್ಲಿ ಕಂಚಾವೀರರಿಂದ ಶಸ್ತ್ರ ಪವಾಡ ಹಾಗೂ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ನಡೆದವು.ಕಂಚಾವೀರರು ಪ್ರಾರಂಭದಲ್ಲಿ ತಮ್ಮ ಪವಾಡ ಶಸ್ತ್ರಗಳನ್ನು ಪೂಜಿಸಿದ ನಂತರ ಗುರು ವೆಂಕಪ್ಪಯ್ಯನವರಿಂದ ಆಶೀರ್ವಾದ ಪಡೆದ ಈ ಬಾರಿ ಕಂಚಾವೀರರಾದ ವಸಂತ,ಮಾಲತೇಶ, ಚೇತನ ಹಾಗೂ ಫಕ್ಕೀರಿಶ ಅವಿವಾಹಿತ ಯವಕರು ತಮ್ಮ ಕಾಲಿನ ಮೀನಗಂಡದಲ್ಲಿ ಸುಮಾರು 4 ಅಡಿ ಉದ್ದದ ಕಬ್ಬಿಣದ ಸರಳನ್ನು ದಾಟಿಸುವ ಪವಾಡ ಮಾಡಿದರು.
ಇದು ನೋಡುಗರ ಮೈ ರೋಮಾಂಚನ ವೆನಿಸುವಂತ್ತಿತ್ತು. ನೆರೆದ ಸಹಾಸ್ರಾರು ಭಕ್ತರು ಏಳುಕೋಟಿಗೋ.. ಏಳುಕೋಟಿಗೋ... ಎಂದು ಹರ್ಷೋದ್ಘಾರ ಗೈದರು.ಅದೇ ರೀತಿ ಕಂಚಾವೀರ ಕಾಲಿನಲ್ಲಿ ಬಗಣಿ ಗೂಟ ಬಡಿದುಕೊಂಡು ಹಗ್ಗ ಹಾಗೂ ಮುಳ್ಳಿನ ಕಂಟೆ ದಾಟಿಸಿಕೊಂಡರು ಮತ್ತು ಮುಂಗೈ ಆರತಿ ಪವಾಡ ಮಾಡಿದರು. ಸರಪಳಿ ಬಾಬುದಾರರಾದ ಉಮೇಶ್ ದಳವಾಯಿ, ಅನಿಲ್ ದಳವಾಯಿ ಕಬ್ಬಿಣ ಸರಪಳಿ ಹರಿಯುವ ಪವಾಡ ಮಾಡಿದರು.ದೇವಸ್ಥಾನದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತ ಸವಿತಾ , ಕಾರ್ಯನಿರ್ವಹಣಾಧಿಕಾರಿ ಮಲ್ಲಫ್ಪ .ಸಿಪಿಐ ದೀಪಕ್ ಬೋಸರೆಡ್ಡಿ, ಪೊಲೀಸ್ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 