ಮೈನವಿರೇಳಿಸಿದ ಕಂಚಾವೀರರ ಶಸ್ತ್ರ ಪವಾಡಗಳು
The amazing feats of Kanchaveera's weapons
ಹೂವಿನಹಡಗಲಿ 06: ಸುಕ್ಷೇತ್ರ ಮೈಲಾರಮೈಲಾರಲಿಂಗೇಶ್ವರ ಜಾತ್ರೆಯ ಎರಡನೇ ದಿನ ಗುರುವಾರ ಮಧ್ಯಾಹ್ನ 3ಗಂಟೆಗೆ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ನೇತೃತ್ವದಲ್ಲಿ ಕಂಚಾವೀರರಿಂದ ಶಸ್ತ್ರ ಪವಾಡ ಹಾಗೂ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ನಡೆದವು.ಕಂಚಾವೀರರು ಪ್ರಾರಂಭದಲ್ಲಿ ತಮ್ಮ ಪವಾಡ ಶಸ್ತ್ರಗಳನ್ನು ಪೂಜಿಸಿದ ನಂತರ ಗುರು ವೆಂಕಪ್ಪಯ್ಯನವರಿಂದ ಆಶೀರ್ವಾದ ಪಡೆದ ಈ ಬಾರಿ ಕಂಚಾವೀರರಾದ ವಸಂತ,ಮಾಲತೇಶ, ಚೇತನ ಹಾಗೂ ಫಕ್ಕೀರಿಶ ಅವಿವಾಹಿತ ಯವಕರು ತಮ್ಮ ಕಾಲಿನ ಮೀನಗಂಡದಲ್ಲಿ ಸುಮಾರು 4 ಅಡಿ ಉದ್ದದ ಕಬ್ಬಿಣದ ಸರಳನ್ನು ದಾಟಿಸುವ ಪವಾಡ ಮಾಡಿದರು.
ಇದು ನೋಡುಗರ ಮೈ ರೋಮಾಂಚನ ವೆನಿಸುವಂತ್ತಿತ್ತು. ನೆರೆದ ಸಹಾಸ್ರಾರು ಭಕ್ತರು ಏಳುಕೋಟಿಗೋ.. ಏಳುಕೋಟಿಗೋ... ಎಂದು ಹರ್ಷೋದ್ಘಾರ ಗೈದರು.ಅದೇ ರೀತಿ ಕಂಚಾವೀರ ಕಾಲಿನಲ್ಲಿ ಬಗಣಿ ಗೂಟ ಬಡಿದುಕೊಂಡು ಹಗ್ಗ ಹಾಗೂ ಮುಳ್ಳಿನ ಕಂಟೆ ದಾಟಿಸಿಕೊಂಡರು ಮತ್ತು ಮುಂಗೈ ಆರತಿ ಪವಾಡ ಮಾಡಿದರು. ಸರಪಳಿ ಬಾಬುದಾರರಾದ ಉಮೇಶ್ ದಳವಾಯಿ, ಅನಿಲ್ ದಳವಾಯಿ ಕಬ್ಬಿಣ ಸರಪಳಿ ಹರಿಯುವ ಪವಾಡ ಮಾಡಿದರು.ದೇವಸ್ಥಾನದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತ ಸವಿತಾ , ಕಾರ್ಯನಿರ್ವಹಣಾಧಿಕಾರಿ ಮಲ್ಲಫ್ಪ .ಸಿಪಿಐ ದೀಪಕ್ ಬೋಸರೆಡ್ಡಿ, ಪೊಲೀಸ್ ಸಿಬ್ಬಂದಿ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 