ಟಾಟಾ ಓಪನ್: ಸುಮಿತ್ ನಗಾಲ್ ಗೂ ವೈಲ್ಡ್ ಕಾರ್ಡ್
ಪುಣೆ, ಜ.29 : ದಕ್ಷಿಣ ಏಷ್ಯಾದ ಏಕೈಕ ಎಟಿವಿ ಟೂರ್ ಟೂರ್ನಿ ಟಾಟಾ ಓಪನ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಇಬ್ಬರು ಆಟಗಾರರು ಸಿಂಗಲ್ಸ್ ಮುಖ್ಯ ಡ್ರಾದಲ್ಲಿ ನೇರ ಪ್ರವೇಶ ಪಡೆದಿದ್ದಾರೆ. ಫೆಬ್ರವರಿ 3 ರಿಂದ 9 ರವರೆಗೆ ಪುಣೆಯ ಮಹಲುಂಗಾ ಬಾಲೆವಾಡಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಮೂರನೇ ಆವೃತ್ತಿಯಲ್ಲಿ ಪ್ರಜ್ನೇಶ್ ಗುನ್ನೇಶ್ವರನ್ ಅವರ ಹೊರತಾಗಿ ಸುಮಿತ್ ನಾಗಲ್ ಪುರುಷರ ಸಿಂಗಲ್ಸ್ನಲ್ಲಿ ಕಣಕ್ಕೆ ಈಳಿಯಲಿದ್ದಾರೆ.
ನಾಗಾಲ್ ಅವರಿಗೆ ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿತ್ತು. ಈಗ ನಾಗಲ್ ಅವರನ್ನು 20 ಆಟಗಾರರ ಮುಖ್ಯ ಡ್ರಾದಲ್ಲಿ ಸೇರಿಸಲಾಗಿದೆ. ಇದಕ್ಕೂ ಮುನ್ನ, ಪೋಲೆಂಡ್ನ ಕಾಮಿಲ್ ಮಕ್ಜಾಕ್ ಪಂದ್ಯಾವಳಿಯಿಂದ ಹಿಂದೆ ಸರಿದ ನಂತರ ಭಾರತದ ನಂಬರ್ 1 ಸಿಂಗಲ್ಸ್ ಆಟಗಾರ ಪ್ರಜ್ನೇಶ್ ಪುರುಷರ ಡ್ರಾದಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.
ಭಾರತದ ಡೇವಿಸ್ ಕಪ್ ಆಟಗಾರ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ರಾಮ್ಕುಮಾರ್ ರಾಮನಾಥನ್ ಕೂಡ ಪಂದ್ಯಾವಳಿಗಾಗಿ ವೈಲ್ಡ್ಕಾರ್ಡ್ ಮೂಲಕ ಪುರುಷರ ಸಿಂಗಲ್ಸ್ ಮುಖ್ಯ ಡ್ರಾದಲ್ಲಿ ಸ್ಥಾನ ಪಡೆದಿದ್ದಾರೆ.
ಮಹಾರಾಷ್ಟ್ರ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ನಲ್ಲಿ (ಎಂಎಸ್ಎಲ್ಟಿಎ) ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿದೆ.
22 ವರ್ಷದ ನಾಗಲ್ ಪ್ರಸ್ತುತ ವಿಶ್ವದ 131 ನೇ ಶ್ರೇಯಾಂಕ ಹೊಂದಿದ್ದಾರೆ. 2019 ರ ಯುಎಸ್ ಓಪನ್ನಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಆಡುವ ನಾಗಲ್, ಮೊದಲ ಸುತ್ತಿನಲ್ಲಿ ಶ್ರೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ಗೆ ಸವಾಲು ಹಾಕುವ ಮೂಲಕ ಒಂದು ಸೆಟ್ ಗೆದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 