ತಾಳಿಕೋಟಿ 27: ಸಮಾಜದಲ್ಲಿರುವ ಬಡ-ಕೂಲಿ ಕಾರ್ಮಿಕರಿಗೆ, ದಿನಗೂಲಿ ಕೆಲಸಗಾರರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಉಟೋಪಚಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಿದೆ. ಇದು ನಮ್ಮ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಮಂಗಳವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 2013 ರಿಂದ 18ರವರೆಗೆ ನಮ್ಮ ಪಕ್ಷದ ಸರ್ಕಾರವಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದರು ಮುಂದೆ ನಮ್ಮ ಪಕ್ಷವು ಅಧಿಕಾರ ಕಳೆದುಕೊಂಡಾಗ ಈ ಕಾರ್ಯ ಸ್ಥಗಿತವಾಯಿತು, ಮತ್ತೆ 2023ರಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿ ಬಂದಾಗ ಈ ಕ್ಯಾಂಟೀನ್ ಗಳನ್ನು ಪುನರ್ಜೀವನಗೊಳಿಸುವ ಕಾರ್ಯ ಆರಂಭವಾಯಿತು. ರಾಜ್ಯದಲ್ಲಿ ಇನ್ನೂ 130 ಹೊಸ ಕ್ಯಾಂಟೀನ್ ಗಳನ್ನು ಆರಂಭಿಸುವ ಯೋಜನೆ ಸರ್ಕಾರದ ಮುಂದಿದೆ ಎಂದ ಅವರು ಇವತ್ತು ನನ್ನ ಮತಕ್ಷೇತ್ರದ ಮೂರು ಪಟ್ಟಣಗಳಲ್ಲಿ ಏಕಕಾಲದಲ್ಲಿ ಈ ಕ್ಯಾಂಟೀನ್ ಗಳನ್ನು ಉದ್ಘಾಟಿಸುತ್ತಿದ್ದೇನೆ. ಈ ಕ್ಯಾಂಟೀನ್ ದಲ್ಲಿ ಅತಿ ಕಡಿಮೆ ದರದಲ್ಲಿ ಉತ್ಕೃಷ್ಟ ಹಾಗೂ ಸ್ವಾದಿಷ್ಟವಾದ ತಿಂಡಿ ಮತ್ತು ಊಟ ಸಿಗುತ್ತದೆ, ಪ್ರತಿದಿನವೂ ವಿಭಿನ್ನ ರೀತಿಯ ಆಹಾರ ಪದಾರ್ಥಗಳು ತಿನ್ನಲು ಸಿಗುತ್ತವೆ ಇದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅತಿ ಹೆಚ್ಚು ಅನುಕೂಲ ವಾಗಲಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ, ಪುರಸಭೆ ಅಧ್ಯಕ್ಷೆ ಜುಬೇದಾಬೇಗಂ ಹುಸೇನ್ ಬಾಷಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪರಶುರಾಮ್ ತಂಗಡಗಿ, ಅಣ್ಣಪ್ಪ ಜಗತಾಪ, ಮುದುಕಪ್ಪ ಬಡಿಗೇರ ಮುಖಂಡರಾದ ಎಂ.ಜಿ.ಪಾಟೀಲ, ಬಾಬುರಾವ್ ಸಿಂಧೆ, ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ, ಎಂ.ಎಸ್.ಸರಶಟ್ಟಿ, ಬಿ.ಎನ್. ಹಿಪ್ಪರಗಿ, ಗಂಗಾಧರ ಕಸ್ತೂರಿ, ಮಾಸೂಮಸಾಬ ಕೆಂಭಾವಿ, ಆನಂದ ಮದರಕಲ್ಲ, ಸಂಗಮೇಶ ದೇಸಾಯಿ, ಸಿಕಂದರ ವಠಾರ,ಆರ್.ಐ. ಒಂಟಿ, ಸಂಗನಗೌಡ ಅಸ್ಕಿ, ಮೋದಿನಸಾ ನಗಾರ್ಚಿ, ಮೆಹಬೂಬಶಾ ಮಕಾಂದಾರ, ಮಹೆಬೂಬ ಕೆಂಭಾವಿ,ಆಸೀಫ ಕೆಂಬಾವಿ, ಗೋಪಾಲ ಕಟ್ಟಿಮನಿ, ಪುರಸಭೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.