ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಯಶಸ್ವಿ
ಕೊಪ್ಪಳ: ಕೊಪ್ಪಳ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದಿಂದ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕುರಿತು ಡಾ. ಬದರಿಪ್ರಸಾದ್ ಪಿ.ಆರ್ ರವರು ಈರುಳ್ಳಿ ಬೆಳೆಗೆ ಬರುವ ಗಡ್ಡೆ ಕೊಳೆ ರೋಗ, ನುಶಿ ಭಾದೆ ಹಾಗೂ ಎಲೆ ತಿನ್ನುವ ಕೀಟದ ಕುರಿತು ರೋಗದ ಮತ್ತು ಕೀಟದ ಭಾದೆಯ ಲಕ್ಷಣ ಹಾಗೂ ನಿಯಂತ್ರಣ ಕುರಿತು ಸಮಗ್ರ ಮಾಹಿತಿ ನೀಡಿದರು.
ಈರುಳ್ಳಿ ಕೇಂದ್ರದ ತೋಟಗಾರಿಕೆ ತಜ್ಞ ಪ್ರದೀಪ ಬಿರಾದಾರ ಮಾತನಾಡಿ, ಪೀಡೆ ನಿಯಂತ್ರಣದಲ್ಲಿ ಪೋಷಕಾಂಶಗಳ ಪಾತ್ರದ ಮಾಹಿತಿ ಜೊತೆಗೆ ತರಕಾರಿ ಸ್ಪೆಷಲ್ ಬಳಕೆ ಹಾಗೂ ಸಿಂಪರಣಾ ವಿಧಾನದ ಬಗ್ಗೆ ನೂತನ ತಳಿಗಳ ಲಭ್ಯತೆ, ಬೇಸಾಯ ಕ್ರಮಗಳು ಹಾಗೂ ಸಂಗ್ರಹಣೆ ಕುರಿತು ರೈತರೊಂದಿಗೆ ಚಚರ್ೆ ನಡೆಸಿ ರೈತರಿಗೆ ಹೊಲದಲ್ಲಿಯೇ ವಿವಿಧ ಬಾದೆಯ ಲಕ್ಷಣಗಳನ್ನು ತೋರಿಸಿದರು. ಪ್ರಗತಿಪರ ರೈತರಾದ ಶಂಕ್ರಪ್ಪ ದೇವರಮನಿ, ಗ್ಯಾನಪ್ಪ, ಚಿನ್ನಪ್ಪ, ಪಕೀರಪ್ಪ, ಶಿವಪ್ಪ, ಈರಣ್ಣ ಹಾಗೂ ಅಶೋಕ ಸೇರಿದಂತೆ ಸುಮಾರು 50 ಅಧಿಕ ರೈತರು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 