ಜನರಿಗೊಬ್ಬ ‘ನಾಯಕ’ ಬೇಕೇ: ಉಪ್ಪಿ
ಬೆಂಗಳೂರು, ಜ 11,ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜನರ ತಲೆಗೆ ಹುಳ ಬಿಡುವ ನಟ, ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಪ್ರಶ್ನಿಸಿದ್ದಾರೆ “ಸರ್ಕಾರದ ಬೊಕ್ಕಸದಲ್ಲಿರುವ ಒಂದೊಂದು ಪೈಸೆಯೂ ನಿಮ್ಮದು ಅಂದಮೇಲೆ ಅದರ ಮೇಲಿನ ಅಧಿಕಾರ,ನಿರ್ಧಾರ ನಿಮ್ಮದೇ ಆಗಿರಬೇಕಲ್ಲವೇ ? ಬರೀ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಮತ್ತು ತಂತ್ರಜ್ಞಾನದಿಂದ ಇದನ್ನು ನೀವೇ ಮಾಡಬಹುದು ಎಂದಾದರೆ ಒಬ್ಬ ನಾಯಕ ನಿಮಗೆ ಬೇಕೇ ?” ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, “ವಿಚಾರ” ಮುಖ್ಯ “ನಾನು” ಎಂಬುದು ಪ್ರಜಾಕೀಯದಲ್ಲಿ ಮುಖ್ಯವಲ್ಲ ಎಂದು ಹೇಳುತ್ತಲೇ ಬರುತ್ತಿದ್ದೇವೆ. ಆ ಅರ್ಥದಲ್ಲೇ ಉಪ್ಪಿ ಚುನಾವಣೆಗೆ ನಿಲ್ಲುವುದು ಬಿಡುವುದು ಮುಖ್ಯವಲ್ಲ ನಾಯಕನ ನಿರೀಕ್ಷೆ ಬೇಡ , ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು ಎಂದು ಹೇಳಿದ್ದೆ. ಇದು ಸರಿಯಲ್ಲವೇ ? ಈ ವ್ಯವಸ್ಥೆ ತರುವುದೇ ನಮ್ಮೆಲ್ಲರ ಜವಾಬ್ದಾರಿಯಲ್ಲವೇ ಎಂದು ಉಪೇಂದ್ರ ಕೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 