ಪಾಕಿಸ್ತಾನ ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ : ಆರ್. ವಿ.ದೇಶಪಾಂಡೆ
Pakistan is desperate, it is a terrorist country: R. V. Deshpande
ಪಾಕಿಸ್ತಾನ ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ : ಆರ್. ವಿ.ದೇಶಪಾಂಡೆ
ಕಾರವಾರ 16: ಪಾಕಿಸ್ತಾನ ಯುದ್ಧದಲ್ಲಿ ಭಾರತದ ಎದುರು ಸೋತಿದೆ. ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಕಾರವಾರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಾಕಿಸ್ತಾನ ಸುಧಾರಿಸಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲ. ಅವರು ಭಾರತದ ಜೊತೆ ಸಂಬಂಧ ಸುಧಾರಿಸಬೇಕು. ಅಲ್ಲಿ ಸಹ ಪ್ರಗತಿಯಾಗಬೇಕು. ಅಭಿವೃದ್ಧಿಯಾಗಬೇಕು , ವ್ಯಾಪಾರ ವಹಿವಾಟು ಹೆಚ್ಚಬೇಕು ಎಂದು ಬಯಸುವವ ನಾನು ಎಂದರು.
ನಮ್ಮ ಸೈನಿಕರಿಗೆ ನಾವು ಮೆಚ್ಚುಗೆ ಕೊಡಬೇಕು, ಸೈನ್ಯವನ್ನು ಗೌರವಿಸಬೇಕು. ಅವರಿಂದ ನಮಗೆ ಪಾಕಿಸ್ತಾನದ ವಿರುದ್ಧ ಗೆಲುವು ಸಿಕ್ಕಿದೆ . ನಮ್ಮ ದೇಶದ ಗೆಲುವಿಮ ಹಿಂದೆ ಸೈನಿಕರ ಶ್ರಮ ಇದೆ ಎಂದರು.ನಮ್ಮ ಸೈನಿಕರನ್ನು ಯಾರೇ ಟೀಕಿಸಿದರೂ ಅದು ತಪ್ಪು ಎಂದರು. ಸೇನೆಗೆ ಬಗ್ಗೆ ನಮಗೆ ಅಭಿಮಾನ ಇರಬೇಕು ಎಂದು ಹಿರಿಯ ಕಾಂಗ್ರೆಸ್ಸಿಗರೂ ಆದ ಆರ್ .ವಿ.ದೇಶಪಾಂಡೆ ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 