ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಚಿಂಚಲಿ-ರಾಯಬಾಗ ಮುಖ್ಯ ರಸ್ತೆ ಜಲಾವೃತ
ಲೋಕದರ್ಶನ ವರದಿ
ರಾಯಬಾಗ 22: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಜಮೀನುಗಳಿಂದ ಅಪಾರ ಪ್ರಮಾಣದಲ್ಲಿ ನೀರು ರಸ್ತೆ ಮೇಲೆ ಬಂದು ಮಂಗಳವಾರ ಬೆಳಿಗ್ಗೆ ಚಿಂಚಲಿ-ರಾಯಬಾಗ ಮುಖ್ಯ ರಸ್ತೆಯ ಹಾಲಹಳ್ಳದ ಸೇತುವೆ ಜಲಾವೃತಗೊಂಡು ಸಂಚಾರ ಬಂದ್ ಆಗಿದೆ. ನೀರು ಹರಿಯುವ ರಭಸಕ್ಕೆ ಸೇತುವೆಯ ತಡೆಗೋಡೆ ಕೊಚ್ಚಿ ಹೋಗಿದೆ.
ಸೇತುವೆ ಜಲಾವೃತದಿಂದಾಗಿ ಕುಡಚಿ, ಸಿದ್ದಾಪೂರ, ಖೇಮಲಾಪೂರ, ಪರಮಾನಂದವಾಡಿ, ಸುಟ್ಟಟ್ಟಿ, ನಿಲಜಿ, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತಾಲೂಕು ಕೇಂದ್ರ ರಾಯಬಾಗಕ್ಕೆ ಹೋಗಲು ತೊಂದರೆಯಾಗಿದೆ. ಚಿಂಚಲಿ ಗ್ರಾಮಸ್ಥರು ಸೇತುವೆ ಮೂಲಕ ಸಾಗಿದರೆ 10 ಕಿ.ಮೀ. ದೂರವಿದ್ದ ರಾಯಬಾಗ ಈಗ ಮೊರಬ ನಿಡಗುಂದಿ ಮೂಲಕ 20 ಕಿ.ಮೀ. ದೂರ ಸಂಚರಿಸಬೇಕಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 