ಲೋಕ ಮೆಚ್ಚಿಸಲು ಲೋಕನಾಥನಿಗೂ ಸಾಧ್ಯವಿಲ್ಲ: ಜಗ್ಗೇಶ್
ಬೆಂಗಳೂರು, ಜ 10 ಯಾವುದೇ ಒಂದು ಕೆಲಸದಿಂದ ಈ ಜಗತ್ತಿನ ಪ್ರತಿಯೊಬ್ಬರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆಇಷ್ಟಕ್ಕೂ ಅವರೇಕೆ ಈ ಮಾತನ್ನಾಡಿದ್ದಾರೆ ಗೊತ್ತಾ? ದೆಹಲಿಯ ನಿರ್ಭಯಾ ಅತ್ಯಾಚಾರಿಗಳನ್ನು ಇದೇ 22ರಂದು ಗಲ್ಲಿಗೇರಿಸುವ ಕಾರ್ಯವನ್ನು ಹ್ಯಾಂಗ್ಮನ್ ಪವನ್ ಜಲ್ಲಾದ್ ಗೆ ಒಪ್ಪಿಸಲಾಗಿದೆ. 57 ವರ್ಷದ ಪವನ್ ಜಲ್ಲಾದ್ ಈ ಬಗ್ಗೆ ಪ್ರತಿಕ್ರಿಯಿಸಿ, “ನನ್ನ ಮಗಳ ಮದುವೆಗೆ ಹಣ ಹೊಂದಿಸಲು ಇದು ದೇವರೇ ಕೊಟ್ಟಿರುವ ಅವಕಾಶ “ ಎಂದು ಹೇಳಿಕೊಂಡಿದ್ದರು.ಈ ಸುದ್ದಿಗೆ ಸ್ಪಂದಿಸಿದ್ದ ಜಗ್ಗೇಶ್, “ನಿರ್ಭಯಾ ಸಾವಿಗೆ ಕಾರಣರಾದ ರಕ್ಕಸರನ್ನು ನೀವೇ ಗಲ್ಲಿಗೇರಿಸುವುದಾದರೆ ಮಗಳ ಮದುವೆಗೆ ಒಂದು ಲಕ್ಷ ರೂಪಾಯಿ ನೀಡುತ್ತೇನೆ” ಎಂದು ಹೇಳಿಕೆ ನೀಡಿದ್ದರು. ಹಾಗೂ ಅವರ ಈ ಮಾತಿಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಇಂದು ಟ್ವಿಟರ್ ನಲ್ಲಿ ಮತ್ತೆ ಪ್ರತಿಕ್ರಿಯಿಸಿರುವ ಜಗ್ಗೇಶ್ “ಒಬ್ಬ ತಂದೆಯಾಗಿ ಗಂಡನಾಗಿ ತಾತನಾಗಿ ಅವನ ಭಾವನೆಗೆ ಸ್ಪಂದಸಿದೆ! ಅತ್ಯಾಚಾರ ಕೊಲೆ ಆ ಹೆಣ್ಣುಕುಲದ ಯಾತನೆ ನನ್ನ ರಕ್ತಕುದಿಸಿತು!ದುರುಳರ ಅಂತ್ಯ ಸಮಾಧಾನವಾಯಿತು! ನನ್ನಭಾವನೆ ಅರ್ಥವಾದವರು ಹರಸಿದರು! ಅರ್ಥವಾಗದವರು ಅಣಕಿಸಿದರು! ನನ್ನಭಾವನೆ ದೇವರಿಗೆ ಅರ್ಥವಾದರೆ ಧನ್ಯ! ಲೋಕ ಮೆಚ್ಚಿಸಲು ಲೋಕನಾಥನಿಗೆ ಸಾಧ್ಯವಿಲ್ಲ ಕಲಿಯುಗದಲ್ಲಿ!ನಾನು ನರಮಾನವ!” ಎಂದಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 