ಲೋಕ ಮೆಚ್ಚಿಸಲು ಲೋಕನಾಥನಿಗೂ ಸಾಧ್ಯವಿಲ್ಲ: ಜಗ್ಗೇಶ್
ಬೆಂಗಳೂರು, ಜ 10 ಯಾವುದೇ ಒಂದು ಕೆಲಸದಿಂದ ಈ ಜಗತ್ತಿನ ಪ್ರತಿಯೊಬ್ಬರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆಇಷ್ಟಕ್ಕೂ ಅವರೇಕೆ ಈ ಮಾತನ್ನಾಡಿದ್ದಾರೆ ಗೊತ್ತಾ? ದೆಹಲಿಯ ನಿರ್ಭಯಾ ಅತ್ಯಾಚಾರಿಗಳನ್ನು ಇದೇ 22ರಂದು ಗಲ್ಲಿಗೇರಿಸುವ ಕಾರ್ಯವನ್ನು ಹ್ಯಾಂಗ್ಮನ್ ಪವನ್ ಜಲ್ಲಾದ್ ಗೆ ಒಪ್ಪಿಸಲಾಗಿದೆ. 57 ವರ್ಷದ ಪವನ್ ಜಲ್ಲಾದ್ ಈ ಬಗ್ಗೆ ಪ್ರತಿಕ್ರಿಯಿಸಿ, “ನನ್ನ ಮಗಳ ಮದುವೆಗೆ ಹಣ ಹೊಂದಿಸಲು ಇದು ದೇವರೇ ಕೊಟ್ಟಿರುವ ಅವಕಾಶ “ ಎಂದು ಹೇಳಿಕೊಂಡಿದ್ದರು.ಈ ಸುದ್ದಿಗೆ ಸ್ಪಂದಿಸಿದ್ದ ಜಗ್ಗೇಶ್, “ನಿರ್ಭಯಾ ಸಾವಿಗೆ ಕಾರಣರಾದ ರಕ್ಕಸರನ್ನು ನೀವೇ ಗಲ್ಲಿಗೇರಿಸುವುದಾದರೆ ಮಗಳ ಮದುವೆಗೆ ಒಂದು ಲಕ್ಷ ರೂಪಾಯಿ ನೀಡುತ್ತೇನೆ” ಎಂದು ಹೇಳಿಕೆ ನೀಡಿದ್ದರು. ಹಾಗೂ ಅವರ ಈ ಮಾತಿಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಇಂದು ಟ್ವಿಟರ್ ನಲ್ಲಿ ಮತ್ತೆ ಪ್ರತಿಕ್ರಿಯಿಸಿರುವ ಜಗ್ಗೇಶ್ “ಒಬ್ಬ ತಂದೆಯಾಗಿ ಗಂಡನಾಗಿ ತಾತನಾಗಿ ಅವನ ಭಾವನೆಗೆ ಸ್ಪಂದಸಿದೆ! ಅತ್ಯಾಚಾರ ಕೊಲೆ ಆ ಹೆಣ್ಣುಕುಲದ ಯಾತನೆ ನನ್ನ ರಕ್ತಕುದಿಸಿತು!ದುರುಳರ ಅಂತ್ಯ ಸಮಾಧಾನವಾಯಿತು! ನನ್ನಭಾವನೆ ಅರ್ಥವಾದವರು ಹರಸಿದರು! ಅರ್ಥವಾಗದವರು ಅಣಕಿಸಿದರು! ನನ್ನಭಾವನೆ ದೇವರಿಗೆ ಅರ್ಥವಾದರೆ ಧನ್ಯ! ಲೋಕ ಮೆಚ್ಚಿಸಲು ಲೋಕನಾಥನಿಗೆ ಸಾಧ್ಯವಿಲ್ಲ ಕಲಿಯುಗದಲ್ಲಿ!ನಾನು ನರಮಾನವ!” ಎಂದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 