ಅಂತರರಾಷ್ಟ್ರೀಯ ಗಾಯಕ ವಿಕ್ಕಿ ಡಿ. ಪಾರೆಖ್ರಿಂದ ಸಿದ್ದಾರೂಢ ಮಠಕ್ಕೆ ಭೇಟಿ
International singer Vicky D. Parekh visits Siddharudha Math
ಹುಬ್ಬಳ್ಳಿ 23: ಅಂತರರಾಷ್ಟ್ರೀಯ ಖ್ಯಾತಿ ಪಡೆದ ಗಾಯಕ ಹಾಗೂ ಜೈನ್ ರಾಕ್ಸ್ಟಾರ್ ವಿಕ್ಕಿ ಡಿ. ಪಾರೆಖ್ ಅವರು ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾದ ಶ್ರೀ ಸಿದ್ದಾರೂಢ ಸ್ವಾಮೀಜಿ ಮಠಕ್ಕೆ ಆತ್ಮೀಯ ಭೇಟಿ ನೀಡಿದರು.
ಸ್ವಾಮೀಜಿಗಳ ಸನ್ನಿಧಿಯಲ್ಲಿ ಭಕ್ತಿಭಾವದಿಂದ ದರ್ಶನ- ಆರತಿ ಮಾಡಿ ಆಶೀರ್ವಾದ ಪಡೆದ ಅವರು, ಮಠದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು.
ಭೇಟಿಯ ಸಂದರ್ಭದಲ್ಲಿ ಮಂಚ ಸಾರಥಿ ಲಲಿತ್ ಪರಮಾರ್ ಹಾಗೂ ವಿಕ್ಕಿ ಪಾರೆಖ್ ಅವರ ತಂಡದ ಇತರ ಕಲಾವಿದರು ಸಹ ಹಾಜರಿದ್ದರು.
ಈ ಸಂದರ್ಭದಲ್ಲಿ ಮಠದ ಮಾಜಿ ಚೇರ್ಮನ್ ಮಹೇಂದ್ರ ಸಿಂಘಿ, ಪ್ರಸ್ತುತ ಚೇರ್ಮನ್ ಚನ್ವೀರ ಮುಂಗರವಾಡಿ ಸೇರಿದಂತೆ ಹಲವಾರು ಗಣ್ಯರು ವಿಕ್ಕಿ ಪಾರೆಖ್ ಮತ್ತು ಲಲಿತ್ ಪರಮಾರ್ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವೀರ ಲಿಂಬ್ ಸೆಂಟರ್ನ ಚೇರ್ಮನ್ ಗೌತಮ್ ಗೋಲೆಚ್ಛಾ, ಪ್ರಕಾಶ ಕಟಾರಿಯಾ, ಕಾಂತಿಲಾಲ್ ಬೋಹರಾ, ಮಹಾವೀರ ಕುಂದೂರ್ ಸೇರಿದಂತೆ ಇತರ ಸಮಾಜಬಂಧುಗಳು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 