ಜಿಲ್ಲಾ ಆಸ್ಪತ್ರೆಯಲ್ಲಿ ಹೋಮಿಯೋಪಥಿಗೂ ಭಾರಿ ಬೇಡಿಕೆ
ಬಾಗಲಕೋಟೆ: ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೋಮಯೋಪಥಿ ಔಷಧಿಗೂ ಸಹ ಭಾರಿ ಬೇಡಿಕೆ ಇದೆ.
ಸಾರ್ವಜನಿಕರಲ್ಲಿ ಹೋಮಿಯೋಪಥಿ ಬಗ್ಗೆ ಹೆಚ್ಚಿನ ಅರಿವು ಇಲ್ಲವಾದರೂ ದಿನಂಪ್ರತಿ ಕನಿಷ್ಠ 20 ರಿಂದ 30 ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲಾ ಆಸ್ಪತ್ರೆಯ ಹೋಮಿಯೋಪಥಿ ವಿಭಾಗಕ್ಕೆ ಭೇಟಿ ನೀಡಿ ಔಷಧಿ ಪಡೆಯುತ್ತಿದ್ದಾರೆ. ಥೈರಾಯಿಡ್, ಲಿವರ್, ಕೂದಲು ಉದುರುವಿಕೆ, ಬಿಳಿಸೆರಗು, ಮುಟ್ಟು ದೋಷ, ಅಲಜರ್ಿ, ಸೈನೆಟಿಸ್, ಆಸಿಡಿಟಿ, ಮೈಗ್ರೇನ್, ಕೀಲು ನೋವು ಸಮಸ್ಯೆಗಳನ್ನು ಹೊತ್ತ ರೋಗಿಗಳಿಗೆ ಹೋಮಿಯೋಪಥಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ ಡಾ.ಕವಿತಾ ಅಮಾಸಿ.
ಕೆಲ ತಾಯಂದಿರಿಗೂ ತಮ್ಮ ಮಕ್ಕಳಿಗೆ ಕೇವಲ ಹೋಮಿಯೋಪಥಿ ಔಷಧಿಯನ್ನೇ ನೀಡುತ್ತಾರೆ. ಹಲವಾರು ಹೆಣ್ಣುಮಕ್ಕಳಿಗೆ ಬಿಳಿಸೆರಗು ಮುಟ್ಟುದೋಷ ಸಮಸ್ಯೆಗಳನ್ನು ಎಲುವು ಕಳು ನೋವುಗಳಿಂದ ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
ರಸಾಯನಿಕ ಸಸ್ಯ ಹಾಗೂ ಪ್ರಾಣಿ ಮೂಲಕ ಔಷಧಿಯಾಗಿರುವ ಹೋಮಿಯೋಪಥಿಗೆ ಇತ್ತೀಚೆಗೆ ಭಾರಿ ಬೇಡಿಕೆ ಕಂಡುಬರುತ್ತಿದ್ದು, ತಿಂಗಳಿಗೆ 500-600 ರೋಗಿಗಳು ತಮ್ಮಿಂದ ಔಷಧೋಪಚಾರ ಪಡೆಯುತ್ತಾರೆನ್ನುತ್ತಾರೆ ಡಾ.ಕವಿತಾ.
ಹೋಮಿಯೋಪಥಿಯಿಂದ ಯಾವುದೇ ರೀತಿಯ ದುಷ್ಪರಿಣಾಮವಿರುವದಿಲ್ಲ. ಇಲ್ಲಿ ನಂಬಿಕೆಯೇ ಮುಖ್ಯವಾಗಿದ್ದು, ಪ್ರತಿ ವೈದ್ಯರು ತಮ್ಮದೇ ಆದ ಅನುಭವದ ಮೇಲೆ ಔಷಧಿಯ ಬಗ್ಗೆ ಹಾಗೂ ಪ್ರಮಾಣ ನಿರ್ಧರಿಸಿ ಉಚಪರಿಸುತ್ತಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 