ಹಾಕಿ ಮಾಂತ್ರಿಕ ಧ್ಯಾನ ಚಂದರ ಜನ್ಮದಿನಾಚರಣೆ
Hockey wizard Dhyan Chand's birthday celebration
ತಾಳಿಕೋಟಿ 30: ಪಟ್ಟಣದ ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯಲ್ಲಿ ಹಾಕಿ ಮಾಂತ್ರಿಕ ಧ್ಯಾನಚಂದರ ಜನ್ಮದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ಧ್ಯಾನಚಂದರ ಭಾವಚಿತ್ರಕ್ಕೆ ಸಂಸ್ಥೆಯ ಆಡಳಿತಾಧಿಕಾರಿ ರವಿ ಪಾಟೀಲರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಮ.ಎಸ್.ರಾಯಗೊಂಡ ಮಾತನಾಡಿ ಧ್ಯಾನಚಂದರು ಹಾಕಿ ಮಾಂತ್ರಿಕರಾಗಲು ಅವರು ಚಂದ್ರನ ಬೆಳದಿಂಗಳಲ್ಲಿ ಪ್ರತಿದಿನ ಪರಿಶ್ರಮದಿಂದ ಆಡುತ್ತಿದ್ದರು ಅದಕ್ಕಾಗಿ ಅವರಿಗೆ ಧ್ಯಾನಸಿಂಗ ಬದಲಾಗಿ ಧ್ಯಾನಚಂದ ಎಂಬ ಹೆಸರಿನಿಂದ ಕರೆಯುವರು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತಾಧಿಕಾರಿ ರವಿ.ಪಾಟೀಲ,ಶ್ರೀ ಎಚ್.ಪಾಟೀಲ ದೈಹಿಕ ಶಿಕ್ಷಣ ಮಾಹಾವಿದ್ಯಾಲಯದ ಪ್ರಾಚಾರ್ಯರಾದ ಶಿವಕುಮಾರ ನಾಯಕ, ಎಚ್.ಪಾಟೀಲ ಪ.ಪೂ.ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಮಂಗ್ಯಾಳ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಕಟ್ಟಿ, ಮುಖ್ಯ ಗುರುಗಳಾದ ಜೆ.ಎಮ್.ಕೊಣ್ಣೂರ,ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಶರಣು ಬಿರಾದಾರ,ಸಾಬಣ್ಣ ಮೇಟಿ,ಸಿದ್ದುಮಠ ಎಮ್.ಎಸ್.ರಾಯಗೊಂಡ ಹಾಗೂ ಎಸ್.ಎಸ್.ವಿದ್ಯಾಸಂಸ್ಥೆಯ ಸಿಬ್ಬಂದಿಗಳಾದ ಬಿ.ಆಯ್.ಹಿರೇಹೊಳಿ, ಎಸ್.ಸಿ.ಗುಡಗುಂಟಿ,ಯು.ಎಚ್.ಗಟನೂರ, ಎಮ್.ಎಸ್.ಬಿರಾದಾರ, ಎಸ್.ಎಸ್.ಪಾಟೀಲ,ಶ್ರೀಮತಿ ಪಿ.ಎಚ್.ನಡಹಳ್ಳಿ,ಶ್ರೀಮತಿ ಎ.ಸಿ.ಗುಮಶೆಟ್ಟಿ, ಕವಿತಾ ಗಚ್ಚಿನಮಠ.ಶ್ರೀಮತಿ ಎಸ್.ಬಿ.ಕೊಣ್ಣೂರ, ಬಸವರಾಜ ಮಡಿವಾಳರ ಉಪಾಧ್ಯಕ್ಷರು ಉಪನ್ಯಾಸಕ ಎಮ್.ಬಿ.ವಾಲೀಕಾರ ನಿರೂಪಿಸಿ ವಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 