ಶಾಶ್ವತವಾಗಿ ಭತ್ತ ಜೋಳ ಖರೀದಿಗೆ ಸರ್ಕಾರಕ್ಕೆ ರೈತರು ಒತ್ತಾಯ
Farmers urge the government to purchase rice and corn permanently
ಶಾಶ್ವತವಾಗಿ ಭತ್ತ ಜೋಳ ಖರೀದಿಗೆ ಸರ್ಕಾರಕ್ಕೆ ರೈತರು ಒತ್ತಾಯ
ಕಂಪ್ಲಿ 03: ರೈತರು ಬೆಳದ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಕ್ಕರೆ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ ಶಾಶ್ವತವಾಗಿ ಖರೀದಿ ಕೇಂದ್ರ ತೆರೆಯಬೇಕು ಎಂದು ಎಮೀಗನೂರು ಗ್ರಾ.ಪಂ ಅಧ್ಯಕ್ಷೆ ವಿ.ಶಾರದ ಹೇಳಿದರು ತಾಲೂಕಿನ ಎಮೀಗನೂರು ಗ್ರಾಮದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ರೈತರು ಅನುಕೂಲಕ್ಕಾಗಿ ಭತ್ತ ಜೋಳ ಶಾಶ್ವತವಾಗಿ ಖರೀದಿ ಕೇಂದ್ರವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು ಆಹಾರ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಜಿಲ್ಲಾ ಕೇಂದ್ರ ವ್ಯವಸ್ಥಾಪಕ ಶಿವ ಬಸವರಾಜ ಮಾತನಾಡಿ ಜೋಳವನ್ನು ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿ ಬೆಂಬಲ ಬೆಲೆ ಪಡೆಯಿರಿ ರೈತರು ಖುದ್ದಾಗಿ ಕೇಂದ್ರಕ್ಕೆ ಭೇಟಿ ನೀಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಮಧ್ಯವರ್ತಿಗಳ ಜೋಳವನ್ನು ಖರೀದಿ ಕೇಂದ್ರಕೇ ತಂದರೆ ಅಂತವರ ವಿರುದ್ದ್ ಕಾನೂನು ಕ್ರಮ ಜರುಗಿಸಲಾಗುವುದು ಎಪ್.ಎ.ಕ್ಯೊ.ಜೋಳಕ್ಕೆ 1ಕ್ವಿಂಟಾಲ್.ಗೆ 3371ರೂ ಇರುತ್ತದೆ ರೈತರು ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದೆ ಉತ್ತಮವಾದ ಜೋಳ ತೆಗೆದುಕೊಂಡು ಬರಬೇಕು ಸಲಹೆ ನೀಡಿದರುಈಗಾಗಲೇ ಬಳ್ಳಾರಿ ಜಿಲ್ಲೆಯ ಎಮೀಗನೂರು .ಕಂಪ್ಲಿ.ಶಿರುಗುಪ್ಪ ಅಚ್ಚುಳಿ ಕರೂರು ಬಳ್ಳಾರಿ ಸಂಡೂರು ಜೋಳ ಖರೀದಿ ಕ್ರೇಂದ್ರ ತರೆಯಲಾಗಿದೆ ಸೊಸೈಟಿಗಳಿಗೆ ಜೋಳ ಖರೀದಿ ವಹಿಸಲಾಗಿದೆ ಎಂದರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೂದಗುಂಪಿ ಖಾಸಿಂಸಾಬ್ ಮುಖ್ಯ ಕಾರ್ಯನಿರ್ವಾಹಕ ಇ.ಜಡೇಶ ಶಿರೇಸ್ತೆದ್ದಾರ ರವೀಂದ್ರ ರಾಥೋಡ್ ಆಹಾರ ನೀರಿಕ್ಷಕರು ವಿ.ವಿರುಪಾಕ್ಷೀಗೌಡರು ರೈತರಾದ ಬಿ.ಸದಾಶಿವಪ್ಪ ಕಾಶೀಂಸಾಬ್ ಖಗಲ್ ಖಾಸೀಮಸಾಬ್ ರಾಘವೇೆಂದ್ರರೆಡ್ಡಿ ಸೂಗುರ್ಪ ಮಹೇಶಗೌಡ ಸೇರಿ ಅನೇಕ ರೈತರಿದ್ದರು ಮಾ001ಎಮೀಗನೂರು ಗ್ರಾಮದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 