ಡೆಹರಾಡೂನ್ ಸೈನಿಕ ಶಾಲೆಗೆ 8 ನೇ ತರಗತಿ ಪ್ರವೇಶಕ್ಕಾಗಿ ಪರೀಕ್ಷೆ
ಬೆಂಗಳೂರು, ಜ
13: ಡೆಹರಾಡೂನ್
ನಲ್ಲಿರುವ ಸೈನಿಕ ಕಲ್ಯಾಣ
ಮತ್ತು ಪುನರ್ವಸತಿ ಇಲಾಖೆಯ
ರಾಷ್ಟ್ರೀಯ ಇಂಡಿಯನ್ ಮಿಲಿಟರಿ
ಕಾಲೇಜ್ನ
8 ನೇ ತರಗತಿ ಪ್ರವೇಶ
ಪರೀಕ್ಷೆಗಾಗಿ ಕರ್ನಾಟಕ ರಾಜ್ಯದ
ಬಾಲಕರಿಂದ ಅರ್ಜಿ ಆಹ್ವಾನಿಸಿದೆ.
ಜನವರಿ 2021 ನೇ
ಸಾಲಿನ ಪ್ರವೇಶಕ್ಕಾಗಿ ಉತ್ತರಾಖಂಡ
ರಾಜ್ಯದ ರಾಷ್ಟ್ರೀಯ ಇಂಡಿಯನ್
ಮಿಲಿಟರಿ ಕಾಲೇಜ್ನಲ್ಲಿ 8 ನೇ
ತರಗತಿಗಾಗಿ ಪ್ರವೇಶ ಬಯಸುವ
ಕರ್ನಾಟಕದ ಬಾಲಕರಿಗೆ ಅರ್ಹತಾ
ಪ್ರವೇಶ ಪರೀಕ್ಷೆಯನ್ನು ಬೆಂಗಳೂರು
ಕೇಂದ್ರದಲ್ಲಿ ಈ ವರ್ಷದ
ಜೂನ್ 1 ಮತ್ತು 2 ರಂದು
ನಡೆಸಲಾಗುತ್ತಿದೆ.
ಅಭ್ಯರ್ಥಿಗಳು ಯಾವುದೇ
ಸರ್ಕಾರದಿಂದ ಮಾನ್ಯತೆ ಪಡೆದಿರುವ
ಶಾಲೆಯಲ್ಲಿ 7ನೇ ತರಗತಿಯಲ್ಲಿ
ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ
ಹಾಗೂ 01-01-2021 ರಂತೆ ಹನ್ನೊಂದುವರೆ
ವರ್ಷದಿಂದ 13 ವರ್ಷದೊಳಗಿರುವ (ಅಂದರೆ
ದಿನಾಂಕ: 02-01-2008 ರಿಂದ 01-07-2009 ರೊಳಗೆ
ಜನಿಸಿರುವ) ಬಾಲಕರು ಮಾತ್ರ
ಸದರಿ ಪ್ರವೇಶ ಪರೀಕ್ಷೆಗೆ
ಅರ್ಹರಿರುತ್ತಾರೆ.
ಈ ಸಂಸ್ಥೆಯ
ಮುಖ್ಯ ಗುರಿ ಯುವಕರನ್ನು
ದೇಶದ ಸಶಸ್ತ್ರ ಪಡೆಗೆ
ಸೇರಲು ಸಿದ್ಧಗೊಳಿಸುವುದು ಹಾಗೂ
ಈ ನಿಟ್ಟಿನಲ್ಲಿ ಯುವಕರಿಗೆ
ಸರ್ವ ರೀತಿಯ ವಿದ್ಯಾಭ್ಯಾಸ,
ತರಬೇತಿ ನೀಡುವುದಾಗಿದೆ. ಕಾಲೇಜಿನಲ್ಲಿ ವರ್ಷವೊಂದಕ್ಕೆ
ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ
ರೂ 42,400/- ಆಗಿರುತ್ತದೆ.
ಅರ್ಜಿ ನಮೂನೆ,
ವಿವರಣ ಪತ್ರ ಹಾಗೂ
ಹಳೇ ಪ್ರಶ್ನೆ ಪತ್ರಿಕೆಗಳಿಗಾಗಿ
ನಿರ್ದೇಶಕರು ಸೈನಿಕ ಕಲ್ಯಾಣ
ಮತ್ತು ಪುನರ್ವಸತಿ ಇಲಾಖೆ,
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ
ಭವನ, ನಂ 58, ಫೀಲ್ಡ್
ಮಾರ್ಷಲ್ ಕೆ.ಎಂ.
ಕಾರ್ಯಪ್ಪ ರಸ್ತೆ ಬೆಂಗಳೂರು
–
560 025 ಸಂಪರ್ಕಿಸಬಹುದಾಗಿದೆ.
“THE
COMMNANDANT RIMC DEHRADUN” PAYABLE AT SBI,
TEL BHAVAN, DEHRADUN (BANK CODE NO. 01576) ಇವರ
ಹೆಸರಿನಲ್ಲಿ ಸೆಳೆದ ರೂ
600 (ಸಾಮಾನ್ಯ ಅಭ್ಯರ್ಥಿಗಳಿಗೆ ) ಮತ್ತು ರೂ
555/- (ಎಸ್/ಎಸ್ಟಿ ಅಭ್ಯರ್ಥಿಗಳಿಗೆ)
ಡಿಮಾಂಡ್ (ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ)
ಡಿಮಾಂಡ್ ಡ್ರಾಪ್ಟ್ ಮೂಲಕ
ಖುದ್ದಾಗಿ ಪಡೆಯಬಹುದಾಗಿದೆ.
ರಿಜಿಸ್ಟರ್ಡ್ ಪಾರ್ಸಲ್
ಮೂಲಕ ಅರ್ಜಿ ನಮೂನೆಗಳನ್ನು
ಪಡೆಯಲಿಚ್ಚಸಲಿರುವ
ಅಭ್ಯರ್ಥಿಗಳು ಮೇಲೆ ತಿಳಿಸಿದ
ಬ್ಯಾಂಕ್ ಡ್ರಾಪ್ಟ್ ನೊಂದಿಗೆ
11”*9” ಅಳತೆ ಸೈನಿಕ ಸ್ವವಿಳಾಸದ
ಲಕೋಟೆಯ ಮೇಲೆ ರೂ
40/- ಮೌಲ್ಯದ ಅಂಚೆ ಚೀಟಿ
ಲಗತ್ತಿಸಿ ಕಳುಹಿಸಬೇಕು. ಲಕೋಟೆಯ
ಮೇಲೆ ಅಭ್ಯರ್ಥಿಯ ಪೂರ್ಣ
ಅಂಚೆ ಮತ್ತು ದೂರವಾಣಿ
ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸತಕ್ಕದು.
ಭರ್ತಿ ಮಾಡಿದ
ನಿಗದಿತ ಅರ್ಜಿ ನಮೂನೆಯನ್ನು
ದ್ವಿಪ್ರತಿಯಲ್ಲಿ ಕೆಳಗಿನ ಅಡಕಗಳೊಂದಿಗೆ
ಇದೇ ಮಾರ್ಚ್ 31 ರೊಳಗೆ
ನಿರ್ದೇಶಕರು ಸೈನಿಕ ಕಲ್ಯಾಣ
ಮತ್ತು ಪುನರ್ವಸತಿ ಇಲಾಖೆ,
ಬೆಂಗಳೂರು ಈ ವಿಳಾಸಕ್ಕೆ
ಸಲ್ಲಿಸಬಹುದಾಗಿದೆ.
ಮುನ್ಸಿಪಾಲಿಟಿ/ಗ್ರಾಮ
ಪಂಚಾಯತ್ ಪ್ರಾಧಿಕಾರ ವತಿಯಿಂದ
ಆಂಗ್ಲ ಭಾಷೆಯಲ್ಲಿ ಪಡೆದ
ಅಭ್ಯರ್ಥಿಯ ಜನ್ಮ ಪ್ರಮಾಣ
ಪತ್ರದ ದೃಢೀಕೃತ ಪ್ರತಿ. 5 ಪಾಸ್ಪೋರ್ಟ್ ಸೈಜಿನ
ಭಾವಚಿತ್ರಗಳು (ಅರ್ಜಿಗಳಲ್ಲಿ ಅಂಟಿಸಿದ
ಭಾವಚಿತ್ರವನ್ನು ಸೇರಿಸಿ)
ಎಸ್ಸಿ/ಎಸ್ಟಿ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 