ಎಡಾಮೊನ್ -ಕೊಚ್ಚಿ ವಿದ್ಯುತ್ ಪ್ರಸರಣ ಮಾರ್ಗ: ಸಿಎಂ ರಿಂದ ಉದ್ಘಾಟನೆ
ತಿರುವನಂತಪುರಂ, ನವೆಂಬರ್ 19 : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಡಾಮೊನ್-ಕೊಚ್ಚಿ ವಿದ್ಯುತ್ ಮಾರ್ಗ ಉದ್ಘಾಟಿಸಿದ್ದು,ಇದರ ಪರಿಣಾಮ ರಾಜ್ಯವು ತನ್ನ 400 ಕೆವಿ ಪ್ರಸರಣ ಜಾಲದ ಮೂಲಕ ದೇಶದ ಯಾವುದೇ ಭಾಗದಿಂದ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ. ನಂತರ ಮಾತನಾಡಿದ ಮುಖ್ಯಮಂತ್ರಿ, ಪವರ್ಗ್ರಿಡ್ ಕಾರ್ಪೋರೇಶನ್ನಿಂದ ಪೂರ್ಣಗೊಂಡ ಈ ಯೋಜನೆ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. 400 ಕೆವಿ ವಿದ್ಯುತ್ ಪ್ರಸರಣ ಜಾಲವು ರಾಜ್ಯದ ವಿದ್ಯುತ್ ಆಮದು ಸಾಮಥ್ರ್ಯವನ್ನು 800 ಮೆಗಾವ್ಯಾಟ್ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. 148 ಕಿ.ಮೀ ಎಡಾಮೋನ್-ಕೊಚ್ಚಿ ಮಾರ್ಗವು 447 ಗೋಪುರಗಳನ್ನು ಹೊಂದಿದ್ದು ಕೊಲ್ಲಂ (22 ಕಿ.ಮೀ), ಪಥನಮತ್ತಟ್ಟ (47 ಕಿ.ಮೀ), ಕೊಟ್ಟಾಯಂ (51 ಕಿ.ಮೀ), ಮತ್ತು ಎರ್ನಾಕುಲಂ (28 ಕಿ.ಮೀ) ಮೂಲಕ ಹಾದುಹೋಗುತ್ತದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 