ಸರ್ಫಿ೦ಗ್ ಸ್ವಾಮಿ ನಿಧನ
ಮಂಗಳೂರು / ಮೈಸೂರು, ಜ. 6 ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿ೦ಗ್ (ಸಮುದ್ರ ಕ್ರೀಡೆ)ನ ಪರಿಣಿತರಾದ ಸರ್ಫಿ೦ಗ್ಗ್ ಸ್ವಾಮಿ (ಸ್ವಾಮಿ ನರಸಿಂಗ) ಸೋಮವಾರ ಇಲ್ಲಿ ನಿಧನರಾದರು.
ಅವರಿಗೆ 76 ವಯಸ್ಸಾಗಿತ್ತು.
ಸ್ವಾಮಿ ಅವರು 2004 ರಲ್ಲಿ ಕರಾವಳಿಯ ಮುಲ್ಕಿಯಲ್ಲಿನ ಮಂತ್ರ ಸರ್ಫಿ೦ಗ್ ಕ್ಲಬ್ನ ಸ್ಥಾಪಕರಾಗಿದ್ದರು. ಈ ಕ್ಲಬ್ನ ಮೂಲಕ ಅವರು ಈ ಪ್ರದೇಶದ ಅನೇಕ ಯುವಕರಿಗೆ ಸರ್ಫಿ೦ಗ್ನಲ್ಲಿ ತರಬೇತಿ ನೀಡಿದರು.
ಸ್ವಾಮಿಯವರು ನಾಥ್ರ್ ಫ್ಲೋರಿಡಾದ ಮೊದಲ ಸರ್ಫಿ೦ ಕ್ಲಬ್ನ ಸ್ಥಾಪಕ ಸದಸ್ಯರಾಗಿದ್ದರು. ಅಮೆರಿಕದ ಈಸ್ಟ್ ಕೋಸ್ಟ್ ನ ಸರ್ಫಿ೦ಗ್ ನಲ್ಲಿ ಪರಿಣಿತರಲ್ಲಿ ಒಬ್ಬರಾಗಿದ್ದರು. ದೇಶದಲ್ಲಿ ಸರ್ಫಿ೦ಗ್ ಅನ್ನು ಮಾನ್ಯತೆ ಪಡೆದ ಕ್ರೀಡೆಯನ್ನಾಗಿಸುವ ಗುರಿಯೊಂದಿಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ ಭಾರತದಲ್ಲಿ ಸರ್ಫಿ೦ಗ್ ಆಂದೋಲನದ ವಿವಿಧ ಆಯಾಮಗಳಲ್ಲಿ ಸ್ವಾಮಿ ಪರಿಣಿತಿ ಪಡೆದಿದ್ದರು.
ಅನೇಕರ ಬದುಕನ್ನು ಬೆಳಗಿಸಿದ ಸ್ವಾಮಿ ಅವರ ನಿಧನದಿಂದ ತುಂಬಾ ದು:ಖವಾಗಿದೆ ಎಂದು ಸ್ವಾಮಿ ಅವರಿಂದ ತರಬೇತಿ ಪಡೆದ ಮೊದಲ ತಲೆಮಾರಿನ ಸರ್ಫರ್ಗಳಲ್ಲಿ ಒಬ್ಬರಾದ ಸರ್ಫಿ೦ಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಮಂತ್ರ ಸರ್ಫಿ ಕ್ಲಬ್ನ ಮುಖ್ಯ ಬೋಧಕ ಕಿಶೋರ್ ಕುಮಾರ್ ಕಂಬನಿ ಮಿಡಿದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 