ಡೇವಿಸ್ ಕಪ್: ಪ್ರಜ್ಞೇಶ್ ಗುಣೇಶ್ವರನ್, ರಾಮಕುಮಾರ್ ಗೆ ಸೋಲು
ಜಾಗರೇಬ್, ಮಾ.7, ಮೊದಲ ಸೆಟ್ ನಲ್ಲಿ ಭಾರತದ ಸ್ಟಾರ್ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಅವರು ಕ್ರೊಯೇಷಿಯಾದ ಬೊರ್ನಾ ಗೊಜೊ ವಿರುದ್ಧ ಶುಕ್ರವಾರ ಸೋತು, ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತ 0–1ರಲ್ಲಿ ಹಿನ್ನಡೆ ಕಂಡಿದೆ.ಗುಣೇಶ್ವರನ್ ಒಂದು ಗಂಟೆ 57 ನಿಮಿಷಗಳಲ್ಲಿ 6-4, 4-6, 2-6ರಿಂದ ಪಂದ್ಯವನ್ನು ಕಳೆದುಕೊಂಡರು. 132 ನೇ ಶ್ರೇಯಾಂಕದ ಗುಣೇಶ್ವರನ್ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದರು, ಆದರೆ ವಿಶ್ವ ರಾಂಕಿಂಗ್ನಲ್ಲಿ 277 ನೇ ಸ್ಥಾನದಲ್ಲಿರುವ ಗೊಜೊ ಮುಂದಿನ ಎರಡು ಸೆಟ್ಗಳನ್ನು ಗೆಲ್ಲುವ ಮೂಲಕ ಕ್ರೊಯೇಷಿಯಾ ಪರ ಸೊಗಸಾದ ಆಟವಾಡಿ ಗಮನ ಸೆಳೆದರು. ಗೊಜೊ ಈ ಪಂದ್ಯದಲ್ಲಿ ಗುಣೇಶ್ವರನ್ ಅವರ ಸರ್ವ್ ಅನ್ನು ನಾಲ್ಕು ಬಾರಿ ಮುರಿದರು. ಡೇವಿಸ್ ಕಪ್ನಲ್ಲಿ ಗೊಜೊ ದಾಖಲಿಸಿದ ಮೊದಲ ಗೆಲುವು ಇದಾಗಿದೆ.ಎರಡನೇ ಸಿಂಗಲ್ಸ್ ಪಂದ್ಯದಲ್ಲಿ, 182 ನೇ ಶ್ರೇಯಾಂಕಿತ ರಾಮ್ಕುಮಾರ್ ರಾಮನಾಥನ್ 7-6 (8), 7-6 (8) ರಿಂದ 2014 ರ ಯುಎಸ್ ಚಾಂಪಿಯನ್ ಮರಿನ್ ಸಿಲಿಕ್ ವಿರುದ್ಧ ಸೋಲು ಕಂಡರು. ಒಂದು ಗಂಟೆ 12 ನಿಮಿಷ ನಡೆದ ಕಾದಾಟದಲ್ಲಿ ರಾಮಕುಮಾರ್ ಸೋಲು ಕಂಡರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 