ಡಿ. ೧ ರಂದು ’ಹಿಂದುತ್ವ ಫಾರ್ ದಿ ಚೆಂಜಿಂಗ್ ಟೈಮ್’ ಪುಸ್ತಕ ಬಿಡುಗಡೆ
HINDU
ತಿರುವನಂತಪುರಂ, ನ ೨೭ -ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರ್ಎಸ್ಎಸ್ ಅಂಗಸಂಸ್ಥೆ ’ಪ್ರಜ್ಞಾ ಪ್ರವಾಹ’ದ ರಾಷ್ಟ್ರೀಯ ಸಂಚಾಲಕ ವಿರಚಿತ ’ಹಿಂದುತ್ವ ಫಾರ್ ದಿ ಚೇಂಜಿಂಗ್’ ಟೈಮ್’ ಪುಸ್ತಕ ಮುಂದಿನ ತಿಂಗಳು ಡಿಸೆಂಬರ್ ೧ ರಂದು ಬಿಡುಗಡೆಯಾಗಲಿದೆ
ಪ್ರಸಾರ ಭಾರತಿ ಅಧ್ಯಕ್ಷ ಎ ಸೂರ್ಯಪ್ರಕಾಶ್ ಅವರು ಡಿ ೧ರಂದು ಕೊಚ್ಚಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ’ಹಿಂದುತ್ವ ಫಾರ್ ದಿ ಚೇಂಜಿಂಗ್’ ಟೈಮ್’ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಬುಧವಾರ ಟ್ವಿಟರ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸೂರ್ಯಪ್ರಕಾಶ್, "ಈ ಪುಸ್ತಕ ಬಿಡುಗಡೆಯ ಭಾಗವಾಗುವುದು ಹೆಮ್ಮೆ ಎನಿಸುತ್ತದೆ. ಕಾರ್ಯಕ್ರಮದಲ್ಲಿ ರಂಗ ಹರಿ ಜಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನಂದಕುಮಾರ್ ಅವರ ಪುಸ್ತಕ ಸಾಹಿತ್ಯ ಭಂಡಾರಕ್ಕೆ ಅಮೂಲ್ಯವಾದ ಸೇರ್ಪಡೆಯಾಗಲಿದೆ" ಎಂದು ಹೇಳಿದ್ದಾರೆ.
ನಂದಕುಮಾರ್ ತಮ್ಮ ಪುಸ್ತಕದಲ್ಲಿ, ಹಿಂದೂ ಧರ್ಮದ ವಿಭಿನ್ನ ತತ್ವ ಚಿಂತನೆಗಳ ವೈಫಲ್ಯ ಮತ್ತು ಯಶಸ್ಸಿನ ಸಾದೃಶ್ಯಗಳ ಬಗ್ಗೆ ಹೋಲಿಸಿದ್ದಾರೆ.
ಬದಲಾಗುತ್ತಿರುವ ಕಾಲದಲ್ಲಿ ಹಿಂದುತ್ವ ಎಷ್ಟು ಪ್ರಸ್ತುತ ಎಂಬುದನ್ನು ವಿವರಿಸುವ ಪುಸ್ತಕವು ಹಿಂದೂ ತತ್ವಶಾಸ್ತ್ರವು ಹಳೆಯದು ಎಂದು ಆರೋಪಿಸುವ ಎಡ ಬುದ್ಧಿಜೀವಿಗಳಿಗೆ ಉತ್ತರಿಸುತ್ತದೆ.
"ಜಾಗತಿಕವಾಗಿ ಹಳತಾಗಿರುವ, ವಿಶೇಷವಾಗಿ ಕೇರಳದ ಎಡಪಂಥೀಯ ಬುದ್ಧಿಜೀವಿಗಳು, ಹಿಂದೂ ತತ್ವಶಾಸ್ತ್ರವನ್ನು ಕುಗ್ಗಿಸಿ ಸಾಂತ್ವನ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಂಡಿದೆ ಎಂದು ನಂದಕುಮಾರ್ ಯುಎನ್ಐಗೆ ತಿಳಿಸಿದ್ದಾರೆ
ಸಿಂಧೂ ಸ್ಕ್ರಾಲ್ಸ್ ಪ್ರೆಸ್ ಪ್ರಕಟಿಸಿದ ಪುಸ್ತಕದ ಮೊದಲ ಪ್ರತಿಯನ್ನು ಆರ್ ಹರಿ ಸ್ವೀಕರಿಸಲಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 