ಜಾಲತಾಣದಲ್ಲಿ ಸದ್ದು ಮಾಡುತ್ತಿರೂ ಕೊರೊನಾ ಜಾಗೃತಿಯ ಹಾಡು'
ಲೋಕದರ್ಶನ ವರದಿ
ಗುತ್ತಲ೧೦ : ಓ ನನ್ನ ದೇಶ ಬಂಧುಗಳೆ ನಿಮಗೊಂದು ನನ್ನಯ ಮನವಿ ಈ ದೇಶದ ಆದೇಶ ಪಾಲಿಸಿ ಕೋರೊನ ಮುಕ್ತವಾಗಿಸಿ ಎಂಬ ಕೋರೊನಾ ಜಾಗೃತಿಯ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಈ ಒಂದು ಗೀತೆಯ ಸಾಹಿತ್ಯವನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕ ಸಾಸರವಾಡ ಗ್ರಾಮದ ನೀಲನಗೌಡ ಪಾಟೀಲ ರವರು ರಚಿಸಿಸದ್ದು ಹಾವೇರಿ ತಾಲೂಕಿನ ನೆಗಳೂರ ಗ್ರಾಮದ ಗಾಯಕ ಕನರ್ಾಟಕ ಗಾನಸಿರಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಮಂಜುಳಾ ಕೊಪ್ಪದ ಅವರು ಹಾಡಿದ್ದು ಈ ಒಂದು ಗೀತೆ ಇತ್ತಿಚೆಗೆ ಬಹಳಷ್ಟು ಪ್ರಚಲಿತವಿರುವಂತಹ ಹಲೋ ಆ್ಯಪ್,ಫೇಸ್ಬುಕ್,ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಇನ್ನಿತರೆ ಆ್ಯಪ್ಗಳಲಿ ಹರಿದಾಡುತ್ತಾ ಕೋರೊನಾ ಜಾಗೃತಿಯನ್ನು ಮೂಡಿಸುತ್ತಿದೆ. ಗಾಯಕಿಯಾದ ಮಂಜುಳಾ ಕೊಪ್ಪದ ಅವರು ವೃತ್ತಿಯಲ್ಲಿ ನೆಗಳೂರಿನ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಯ ಅಡುಗೆಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಇತ್ತೀಚೆಗೆ ಸಂಗೀತ ಕಲೆಗೆ ಮನಸೋತು ಹಾಡುಗಳನ್ನು ಹಾಡುವ ಮೂಲಕ ತಮ್ಮ ಮಧುರ ಕಂಠದಿಂದ ಮಂಜುಳ ಗಾನವನ್ನು ಸುರಿಸುತ್ತಿದ್ದಾರೆ.
ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೋರೊನಾ ವೈರಸ್ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಗೀತೆಯನ್ನು ಬರೆದಿರುವ ಗ್ರಾಮೀಣ ಭಾಗದ ಕಲಾ ಪ್ರತಿಭೆ ಸಾಸರವಾಡ ಗ್ರಾಮದ ನೀಲನಗೌಡ ಪಾಟೀಲ ಹಾಗೂ ಈ ಒಂದು ಸಾಹಿತ್ಯಕ್ಕೆ ತಮ್ಮ ಮಧುರ ಕಂಠದಿಂದ ಗೀತೆಯನ್ನು ಹಾಡಿರುವ ನೆಗಳೂರ ಗ್ರಾಮದ ಮಂಜುಳಾ ವರು ಅದ್ಭುತವಾಗಿ ಹಾಡಿದ್ದು ಈ ಒಂದು ಗೀತೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. -ಡಾ|| ಮಳೆಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಮಾನಿಹಳ್ಳಿ ಪುರವರ್ಗಮಠ ಮಾನಿಹಳ್ಳಿ ತಾ|| ಹೂವಿನಹಡಗಲಿ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 